ಆಳಂದ: ಅಂಗವಾಗಿ ಎ.ವಿ.ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ಯೋಗ ಶಿಬಿರ ನಡೆಯಿತು. ಇದೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಯೋಗಾ ಪಟು ಕುಮಾರಿ ಭಾಗ್ಯಶ್ರೀ ಅವರಿಂದ ಯೋಗದ ವಿವಿಧ ಭಂಗಿಯ ಆಸನಗಳನ್ನು ಮಾಡಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಚ್.ಹೋಸಮನಿ ಅವರು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ದೇಶದ ಸದೃಢ ಭಾರತಕ್ಕೆ ಯೋಗ ತುಂಬಾ ಅನಿವಾರ್ಯತೆ ಇದೆ ಇದಕ್ಕೆ ಸಮಯ ಮೀಸಲಿಡಬೇಕಾಗಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರು ಪ್ರೊ.ಸಿದ್ದರಾಮ ಬಿಜಾಪುರ, ಪ್ರೊ.ಎಸ್.ಎಸ್.ಕಂಮ್ಮಾರ, ಡಾ.ರಾಜಶೇಖ ಬಾಬನೂರು,ಡಾ.ರಮೇಶ ಮಸರೋಬ, ಡಾ.ಜೈ ಪ್ರಕಾಶ.ಭಾವಿಮನಿ,ಡಾ.ಬಬ್ರುವಾಹನ, ಪ್ರೊ.ಅಶ್ವಿನಿ ವಳಸಂಗ,ಪ್ರೊ. ಅಂಬರೀಶ್ ಕುಂಬಾರ,ಪ್ರೊ. ಬಸವರಾಜ ಶ್ರೀಂಗೇರಿ, ಸತೀಶ ಪಾಟೀಲ, ವಾಮನದೇವಿ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.