ಕಲಬುರಗಿ: ನಗರದ ಅನನ್ಯ ಡಿಗ್ರಿ ಮತ್ತು ಎಮ್.ಎಸ್. ಡಬ್ಯ್ಲೂ ಕಾಲೇನಲ್ಲಿ 2568ನೇ ವರ್ಷದ ಗೌತಮ ಬುದ್ಧ ಪೂರ್ಣಿಮಾ ಆಚರಿಸಲಾಯಿತು.
ಗೌತಮ ಬುದ್ದರ ಭಾವಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ: ಶರಣು ಬಿ. ಹೊನ್ನಗೆಜ್ಜಿ ರವರು ಪೂಜೆ ಸಲ್ಲಿಸಿ ಮಾತನಾಡಿ ಜಗತ್ತಿಗೆ ಶಾಂತಿ ಸಂದೇಶ ಸಾರಿದರು ಮತ್ತು ಜಗತ್ತಿಗೆ ಜ್ಞಾನದ ಬೆಳಕನ್ನು ಪಸರಿಸಿ, ಶಾಂತಿ ಮಂತ್ರದ ಭೋಸಿಸಿದ ಮಹಾನ ವಿಶ್ವಜ್ಞಾನಿ ಆಗಿದ್ದಾರೆ ಗೌತಮ ಬುದ್ದರು ಎಂದು ಬುದ್ದರ 2568 ಬುದ್ದ ಪೂರ್ಣಿಮಾ ಆಚರಿಸುವದು ಎಂದರು.
ಸಂಸ್ಥೆಯ ಸಂಸ್ಥಾಪಕರಾದ ಸುಷ್ಮಾವತಿ ಎಸ್. ಹೊನ್ನಗೆಜ್ಜಿ ಅವರು ಗೌತಮ ಬುದ್ದರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ಷತಾ ಪಾಟೀಲ, ರಾಜೇಶ್ವರಿ ಎಮ್. ಸುಜತಾ ದೇವಣಕರ್, ರಾಜೇಶ್ವರಿ ಕೆ. ವಿಜಯಲಕ್ಷ್ಮೀ ಎಮ್ ಇದ್ದರು.