ಪೂಜ್ಯರು ಬಡವ, ದೀನ, ದುರ್ಬಲರ ಮತ್ತು ಅನಾಥರ ಬಂಧು

0
25

ಬಸವಕಲ್ಯಾಣ; ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಹಿರೇಮಠದಲ್ಲಿ ನಡೆಯುತ್ತಿರುವ ಗುರುಪ್ರಸಾದ ಪ್ರೌಢಶಾಲೆಯ 2023-24 ನೇ ಶೈಕ್ಷಣಿಕ ಸಾಲಿನ ಪರೀಕ್ಷೆ ಫಲಿತಾಂಶದ ಕರಪತ್ರ ಬಿಡುಗಡೆಗೊಳಿಸಲಾಯಿತು.

ದಿವ್ಯ ಸಾನಿಧ್ಯವಹಿಸಿ, ಕರಪತ್ರ ಬಿಡುಗಡೆಗೊಳಿಸಿದ ಇಳಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಭಾಲ್ಕಿ ಹಿರೇಮಠದ ಪೂಜ್ಯ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಡವ, ದೀನ, ದುರ್ಬಲರ ಮತ್ತು ಅನಾಥರ ಬಂಧುವಾಗಿ ಎಲ್ಲರ ಕಷ್ಟಗಳಿಗೆ ಸ್ಪದಿಸುತ್ತ, ಅಂತಹವರಿಗಾಗಿ ಹಿರೇಮಠದಲ್ಲಿ ಶಾಲೆಯನ್ನು ಪ್ರಾರಂಭಿಸಿ, ಅವರಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಹಸುಗೂಸುಗಳನ್ನು ಎತ್ತಿಕೊಂಡು ತಾಯಿಕ್ಕಿಂತಲೂ ಹೆಚ್ಚಿನ ಪ್ರೀತಿ, ಮಮತೆ, ವಾತ್ಸಲ್ಯ ತೋರಿ ಅವರ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಉಡುಪಾಗಿಟ್ಟಿದ್ದಾರೆ.

Contact Your\'s Advertisement; 9902492681

ಯಾವುದೇ ಕಷ್ಟವನ್ನು ತೆಗೆದುಕೊಂಡು ಪೂಜ್ಯರ ಹತ್ತಿರ ಬಂದವರಿಗೆ ಅವರ ಕಷ್ಟವನ್ನು ಪರಿಹರಿಸಿ ಅವರಿಗೆ ಆಶ್ರಯ ನೀಡುತ್ತಾರೆ. ಶ್ರೀಮಠದಲ್ಲಿ ವೃದ್ಧರಿಗೆ, ವಿಧವೆಯರಿಗೆ ಆಶ್ರಯ ನೀಡಿ ಅವರ ಬೇಕುಬೇಡಗಳನ್ನು ಪೂರೈಸಿ, ಅವರ ಯೋಗಕ್ಷೇಮ ವಿಚಾರಿಸುತ್ತಿರುವ ಅವರ ತಾಯಿ ಹೃದಯ ಮೆಚ್ಚುವಂತಹದ್ದು ಪೂಜ್ಯರು ಬೇಡಿದನ್ನು ಕೊಡುವ ಅಕ್ಷಯ ಪಾತ್ರೆಯಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.

ಪೂಜ್ಯ ಶ್ರೀ ಡಾ. ಬಸವಲಿಂಗ ಮಹಾಸ್ವಾಮಿಗಳು ಸತ್ತಿ, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಜನವಾಡ, ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಬಸವಕಲ್ಯಾಣ, ಮುಂತಾದ ಪೂಜ್ಯರು ಸಮ್ಮುಖ ವಹಿಸಿದ್ದರು. ಶಾಲೆಯ ಮುಖ್ಯಗುರುಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here