ಸುರಪುರ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಆಗ್ರಹ

0
152

ಸುರಪುರ: ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ವತಿಯಿಂದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿ,ಸುರಪುರ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ರಮೇಶ ದೊರೆ ಆಳ್ದಾಳ ಒತ್ತಾಯಿಸಿದ್ದಾರೆ.

ಈ ಕುರಿತು ಬರೆದ ಮನವಿಯನ್ನು ಕಲಬುರ್ಗಿ ವಿಭಾಗಿಯ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬೇಕರ್ ಅವರ ಮೂಲಕ ಮನವಿ ಸಲ್ಲಿಸಿದ್ದು.ಸುರಪುರ ಪೊಲೀಸ್ ಠಾಣೆ ೧೯೭೨ರಲ್ಲಿ ಆರಂಭಗೊಂಡಿದೆ ಅಂದಿನ ಜನಸಂಖ್ಯೆಗನುಗುಣವಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು.ಆದರೆ ಈಗ ಜನಸಂಖ್ಯೆ ದುಪ್ಪಟ್ಟಾಗಿದೆ. ಅಲ್ಲದೆ ಸುರಪುರ ಠಾಣೆ ವ್ಯಾಪ್ತಿಗೆ ಸುಮಾರು ಐವತ್ತಕ್ಕು ಹೆಚ್ಚು ಗ್ರಾಮಗಳಿದ್ದು ಎಲ್ಲಾ ಗ್ರಾಮಗಳಿಗೆ ಪೊಲೀಸ್ ಭೇಟಿ ನೀಡಲು, ರಾತ್ರಿ ಗಸ್ತು ತಿರಗಲು ಸಾಧ್ಯವಾಗದು.ನಮ್ಮ ಸುರಪುರ ತಾಲ್ಲೂಕು ಸೂಕ್ಷ್ಮ ಕೇಂದ್ರದಲ್ಲಿ ಒಂದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ನೇಮಿಸುವಂತೆ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಸುರಪುರ ಉಪ ವಿಭಾಗ ಆರಂಭಗೊಂಡು ಮೂರು ವರ್ಷವಾದರೂ ಇನ್ನೂ ಉಪ ವಿಭಾಗಕ್ಕೆ ನೂತನ ಕಟ್ಟಡ ನಿರ್ಮಾಣಗೊಳಿಸಿಲ್ಲ ಜೊತೆಗೆ ಡಿಎಸ್‌ಪಿ ಯವರ ವಾಸಿಸಲು ವಸತಿಗೃಹ ನಿರ್ಮಾಣಗೊಳಿಸಬೇಕು.ಮುಖ್ಯವಾಗಿ ಸುರಪುರ ಪೊಲೀಸ್ ವಸತಿಗೃಹಗಳು ನಿರ್ಮಾಣಗೊಳಿಸಿ ಸುಮಾರು ಐವತ್ತು ವರ್ಸಗಳಾಗಿವೆ.ಈಗ ಪೊಲೀಸ್ ವಸತಿ ಗೃಹಗಳು ಯಾವಾಗ ಬೀಳುವವೊ ಗೊತ್ತಿಲ್ಲದಂತಿವೆ,ಆದ್ದರಿಂದ ನೂತನ ಸುಸಜ್ಜಿತವಾದ ಪೊಲೀಸ್ ವಸತಿ ಗೃಹಗಳ ನಿರ್ಮಿಸಬೇಕು.ನಗರದಲ್ಲಿ ವಾಹನಗಳ ಓಡಾಟ ಹೆಚ್ಚಿನ ಮಟ್ಟದಲ್ಲಿದ್ದು ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.ಆದ್ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ, ಭೀಮು ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here