ಕಲ್ಯಾಣ ನಾಡಲ್ಲಿ ಕಾಂಗ್ರೆಸ್ ಜಯಭೇರಿ : ನಯೀಮ್ ಖಾನ್ ಸಂತಸ

0
20

ಕಲಬುರಗಿ : ಲೋಕಸಭೆ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿದ್ದ ರಾಧಾಕೃಷ್ಣ ದೊಡ್ಡನಿಯವರ ಗೆಲುವಿಗೆ ಗುಲಬರ್ಗಾ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಮಾತನಾಡಿದ ಅವರು ರಾಜ್ಯದ ಜನತೆ, ಅದರಲ್ಲೂ ಕಲಬುರಗಿ ಗ್ರಾಮೀಣ ಜನತೆ ರಾಜ್ಯದಲ್ಲಿನ ಕಾಂಗ್ರೆಸ್ ಪಂಚ ಗ್ಯಾರಂಟಿಗಳಿಗೆ ಮನಸೋತು ಮತ ಹಾಕಿದ್ದಾರೆ. ಇದಲ್ಲದೆ ಎಐಸಿಸಿ ಅಧ್ಯಕ್ಷರು ಲೋಕಸಭೆಯಲ್ಲಿ ಘೋಷಿಸಿರುವ ಅನೇಕ ಗ್ಯಾರಂಟಿಯೋಜನೆಗಳಿಗೂ ಗಮನ ಕಟ್ಟು ಜನ ಮತ ಹಾಕಿದ್ದಾರೆ.

Contact Your\'s Advertisement; 9902492681

ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದಾಗ್ಯೂ ಬಿಜೆಪಿ-ಜೆಡಿಎಸ್ ಮೈತ್ರಿ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿರಬಹುದು. ಆದರೆ ಕಲ್ಯಾಣ ನಾಡಲ್ಲಿರುವ ಎಲ್ಲಾ 5 ಸ್ಥಾನ ಗೆದ್ದು ಬೀಗಿದ್ದೇವೆ. ಎಐಸಿಸಿ ಅಧ್ಯಕ್ಷರ ತವರು ನಾಡು ಈ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಎಂದಿನಂತೆ ಕಳೆಗಟ್ಟಿದೆ ಕಾಂಗ್ರೆಸ್ ಕಲ್ಯಾಣಕ್ಕೆ ನೀಡಿರುವ ಕಲಂ 371 ಜೆ ಕೊಡುಗೆ ಫಲ ದೇಶದಲ್ಲೇ ಇಂಡಿಯಾ ಒಕ್ಕೂಟಕ್ಕೆ ಜನ ಬೆಂಬಲಿಸಿದ್ದಾರೆ. ಎಂದು ನಯೀಮ್ ಖಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here