ಶಾಸಕ ರಾಜಾ ವೇಣುಗೋಪಾಲ ನಾಯಕ ಅಭಿಮಾನಿಯ ದೀಡ ನಮಸ್ಕಾರದ ಹರಕೆ

0
16

ಸುರಪುರ: ತಾಲುಕಿನ ಬಾದ್ಯಾಪುರ ಗ್ರಾಮ ದಿಂದ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಅಭಿಮಾನಿಯೊಬ್ಬ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ದೀಡ ನಮಸ್ಕಾರ ಹಾಕುವ ಮೂಲಕ ತನ್ನ ಹರಕೆ ಸಲ್ಲಿಸಿದ್ದಾನೆ.

ಬಾದ್ಯಾಪುರ ಗ್ರಾಮದ ಕಾಂಗ್ರೆಸ್ ಮುಖಂಡ ಹಾಗೂ ರಾಜಾ ವೇಣುಗೊಪಾಲ ನಾಯಕ ಅವರ ಅಭಿಮಾನಿ ಯಲ್ಲಪ್ಪ ಕವಲ್ದಾರ್ ಕಳೆದ ಮೇ 7 ರಂದು ನಡೆದ ಸುರಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ ಅವರು ಜಯಗಳಿಸಿದಲ್ಲಿ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ದೀಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದ,ಈಗ ಫಲಿತಾಂಶ ಬಂದು ರಾಜಾ ವೇಣುಗೋಪಾಲ ನಾಯಕ ಅವರು ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಾದ್ಯಾಪುರ ಗ್ರಾಮ ದಿಂದ ಹತ್ತು ಕಿಲೋ ಮೀಟರ್‍ಗಳ ದೂರದ ಸುರಪುರ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ವರೆಗೆ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ.

Contact Your\'s Advertisement; 9902492681

ಗ್ರಾಮ ದಿಂದ ದೀಡ ನಮಸ್ಕಾರದ ಯಾತ್ರೆ ಆರಂಭವಾಗುತ್ತಿದ್ದಂತೆ ಗ್ರಾಮದಲ್ಲಿನ ಅನೇಕ ಜನ ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಹಿಡಿದು ಭಾಜಾ ಬಜಂತ್ರಿಯೊಂದಿಗೆ ಯಲ್ಲಪ್ಪ ಕವಲ್ದಾರ್ ಜೊತೆಗೆ ತಾವುಗಳು ಸಾಗಿಬಂದು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ತಲುಪಿದ ನಂತರ ಯಲ್ಲಪ್ಪ ಕವಲ್ದಾರ್‍ಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಯ್ಯಪ್ಪ ವಾರಿ,ಭೀಮಣ್ಣ ಕುರಿ,ಸಿದ್ದಪ್ಪ ಅಲಗುಂಡಿ,ಭೀಮಣ್ಣ ಕವಲ್ದಾರ್,ಸಕ್ರೆಪ್ಪ ಅಂತೋಳಿ,ಶರಣಪ್ಪ ಬ್ಯಾಳಿ,ಭೀಮಣ್ಣ ಪಾಳೆಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here