ಕುಮಾರಸ್ವಾಮಿ ಪ್ರಮಾಣ ವಚನ: ಜೆಡಿಎಸ್ ಸಂಭ್ರಮಾಚರಣೆ

0
19

ಸುರಪುರ:ಕೇಂದ್ರ ಸರಕಾರದಲ್ಲಿ ಸಚಿವರಾಗಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ,ಮಂಡ್ಯ ಸಂಸದ ಹೆಚ್.ಡಿ.ಕುಮಾರಸ್ವಾಮಿಯವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜೆಡಿಎಸ್ ತಾಲೂಕು ಘಟಕ ದಿಂದ ಸಂಭ್ರಮಾಚರಣೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಮಾತನಾಡಿ,ನಮ್ಮ ನಾಯಕರಾದ ಕುಮಾರಸ್ವಾಮಿಯವರು ನಾಡು ಕಂಡ ಮಹಾನ್ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ, ಮುಖ್ಯಮಂತ್ರಿಗಳಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ,ಅದರಂತೆ ಈಗ ಕೇಂದ್ರ ಸರಕಾರದ ಸಚಿವರಾಗಿದ್ದು ಅವರಿಗೆ ಉತ್ತಮವಾದ ಖಾತೆಯನ್ನು ನೀಡಿದಲ್ಲಿ ಖಾತೆಗೆ ಸಂಬಂಧಿಸಿರುವ ಇಲಾಖೆ ಮೂಲಕ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ನೀಡಲಿದ್ದಾರೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಮೂರ್ತಿಗೆ ಮಾಲಾರ್ಪಣೆ ಮಾಡಿ,ಗುಲಾಲು ಎರಚಿ,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಮುಖಂಡರಾದ ತಿಪ್ಪಣ್ಣ ಪೊಲೀಸ್ ಪಾಟೀಲ್,ಮಲ್ಲಣಗೌಡ ಬಾಚಿಮಟ್ಟಿ,ಶಾಂತು ತಳವಾರಗೇರ,ಶಬ್ಬಿರ ನಗನೂರಿ,ಅಲ್ತಾಫ ಸಗರಿ,ಎಮ್.ಡಿ ಮಹಿಬೂಬ,ಬಸವರಾಜ ಅಮಲಿಹಾಳ,ಆನಂದ,ಅನ್ವರ ನಗನೂರಿ,ಸಾದಿಖ್,ಝಾಕೀರ್ ಹುಸೇನ್,ಇಕ್ಬಾಲ್,ಸುಭಾನ ಎಮ್.ಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here