ಚಂದ್ರಕಾಂತ ಮಡಿವಾಳಗೆ ನಿಗಮದ ನಿರ್ದೇಶಕರನ್ನಾಗಿ ಮಾಡಲು ಆಗ್ರಹ

0
50

ಶಹಾಬಾದ: ಕರ್ನಾಟಕ ರಾಜ್ಯಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಭಂಕೂರಿನ ಚಂದ್ರಕಾಂತ ಮಡಿವಾಳ ಅವರನ್ನು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ಕಾಂಗ್ರೆಸ್ ಮುಖಂಡರಾದ ಶರಣಗೌಡ ದಳಪತಿ,ಸುರೇಶ ಮೆಂಗನ್, ಮಲ್ಲಿಕಾರ್ಜುನ ಸ್ವಾಮಿ,ಈರಣ್ಣ ಗುಡೂರ್, ಮಲ್ಲಿಕಾರ್ಜುನ ಜಲಂಧರ್ ಸೇರಿದಂತೆ ಅನೇಕರು ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಚಂದ್ರಕಾಂತ ಮಡಿವಾಳ ಅವರು ಈಗಾಗಲೇ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.ಅವರನ್ನು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಮಡಿವಾಳ ಸಮಾಜದಿಂದ ಒತ್ತಾಯ:ತಾಲೂಕಿನ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ
ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಪರೀಟ್, ಗುಂಡಪ್ಪ ಮಡಿವಾಳ, ರಾಜು ಮಡಿವಾಳ, ಸಾಬಣ್ಣ ಮಡಿವಾಳ, ಮಲ್ಲೇಶಿವಾಡಿ, ಸಾಬಣ್ಣವಾಡಿ, ಮಲ್ಲೇಶಪ್ಪ ತರನಳ್ಳಿ, ಮಡಿವಾಳಪ್ಪ ಮಡಿವಾಳ, ನಾಗು ಪರೀಟ್, ಸಂತೋಷ ಮಡಿವಾಳ, ಪಿರಪ್ಪ ಜಾಫರ್ ಕರ್, ಸಂಗಮೇಶ ಮಡಿವಾಳ, ಶಶಿಕಾಂತ ಮಡಿವಾ¼, ರೇವಪ್ಪ ಪರೀಟ್, ನಾಗಣ್ಣ ಮಡ್ಡಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here