ಜುಲೈ 7.ರಂದು ವೀರಶೈವ ಲಿಂಗಾಯತ ಯುವ ಸಮ್ಮಿಲನ-2 ಕಾರ್ಯಕ್ರಮ

0
19

ಕಲಬುರಗಿ: ಬಸವೇಶ್ವರ ಸೇವಾ ಸಮಜಾ ಟ್ರಸ್ಟ್ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಅನುಭವ ಮಂಟಪದಲ್ಲಿ ರವಿವಾರ ಬೆಳೆಗ್ಗೆ 10 ಗಂಟೆಗೆ ವೀರಶೈವ ಲಿಂಗಾಯತ ಯುವ ಸಮ್ಮಿಲನ-2 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮುಖಂಡರಾದ ದಯಾನಂದ್ ಎಮ್ ಪಾಟೀಲ್ ಮತ್ತು ಶ್ರೀಧರ್ ಎಮ್ ನಾಗನಹಳ್ಳಿ ಅವರು ತಿಳಿಸಿದ್ದಾರೆ.

ಕೇಂದ್ರದಲ್ಲಿ ಎಲ್ಲಾ ವೀರಶೈವ ಲಿಂಗಾಯತ ಉಪ ಪಂಗಡಗಳನ್ನು ಓಬಿಸಿ ಗೆ ಸೇರಿಸಬೇಕೆಂದು ಮತ್ತು ಸಮಾಜದ ಸಂಘಟನೆ, ವೀರಶೈವ ಲಿಂಗಾಯತರ ಮೇಲಿನ ದೌರ್ಜನ್ಯ, ಹಲ್ಲೆ ಖಂಡಿಸಲು ಒಂದಾಗಲೂ ಚರ್ಚೆ, ಸಮಾಜದ ಸಂತ್ರಸ್ತರಿಗೆ ಧೈರ್ಯ ತುಂಬುವದು, ಪಕ್ಷತೀತವಾಗಿ ಹೋರಾಟದ ರೂಪುರೇಷೆ ಕುರಿತು ಮುಕ್ತ ಚರ್ಚೆ ನಡೆಯಲಿದೆ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here