ಶಹಾಬಾದ: ಸಾರ್ವಜನಿಕರ ಸಮಸ್ಯೆ ಅರಿಯಲು ಉತ್ತಮ ವೇದಿಕೆ / ವಾರದಲ್ಲಿ ಜನರ ಸಮಸ್ಯೆ ಬಗೆಹರಿಯುತ್ತದೆ

0
26

ನಗರಸಭೆ ಸದಸ್ಯರ ಉಪಸ್ಥಿತಿಯಲ್ಲಿ ವಾರ್ಡ್ ಮಟ್ಟದ ಜನಸ್ಪಂದನ ಸಭ

ಶಹಾಬಾದ:ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಆದೇಶ ಮೇರೆಗೆ ನಗರದ ಹಳೆಶಹಾಬಾದನ 1,2,3 ಮತ್ತು 4 ವಾರ್ಡಗಳ ವಾರ್ಡ ಮಟ್ಟದ ಜನ ಸ್ಪಂದನ ಸಭೆ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ವಾರ್ಡ ಸದಸ್ಯರ ಸಮ್ಮುಖದಲ್ಲಿ ವಾರ್ಡನ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಲಾಗಿತ್ತು ಎಂದು ಸಾರ್ವಜನಿಕರಿಂದ ಕೇಳಿ ಬಂದಿತು.

Contact Your\'s Advertisement; 9902492681

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಜಗದೀಶ ಚೌರ್ ಮಾತನಾಡಿ, ವಾರ್ಡ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ವಾರ್ಡನ ಸಮಸ್ಯೆಗಳನ್ನು ಹೇಳಿಕೊಳ್ಳಲು ಉತ್ತಮ ಅವಕಾಶವ ಕಲ್ಪಿಸಲಾಗಿದೆ.ತಮ್ಮ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು ಕಾರ್ಯಗತರಾಗುತ್ತಾರೆ ಎಂದು ಹೇಳಿದರು.

ವಾರ್ಡಗಳಲ್ಲಿ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆ, ಚರಂಡಿ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಬಹುತೇಖ ಸಾರ್ವಜನಿಕರಿಂದ ದೂರುಗಳು ಕೇಳಿಬಂದವು.ಅಲ್ಲದೇ ನಗರಸಭೆಯ ಸದಸ್ಯ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಇಲ್ಲಿನ ಪ್ರಮುಖ ಸಮಸ್ಯೆಯೆಂದರೆ ಇ-ಖಾತೆ ಹಾಗೂ ಆಸ್ತಿ ವರ್ಗಾವಣೆ ಮಾಡಿಕೊಳ್ಳಲು ಜನರಲ್ಲಿ ಲಿಂಕ್ ಡಾಕುಮೆಂಟ್ ಇಲ್ಲ.ಇದರಿಂದ ಇ-ಖಾತೆ ಮಾಡಿಕೊಳ್ಳಲು ತುಂಬಾ ತೊಂದರೆಯಾಗುತ್ತಿದೆ.ಆದ್ದರಿಂದ ತೆರಿಗೆ ಪಾವತಿಯಾದವರಿಗೆ ಇ-ಖಾತೆ ನೀಡುವಂತೆ ಕ್ರಮಕೈಗೊಳ್ಳಬೇಕು.ಅಲ್ಲದೇ ಮಹಿಳಾ ಶೌಚಾಲಯಗಳಿದ್ದರೂ ಸ್ವಚ್ಛತೆಯಿಲ್ಲದೇ ಬಳಸದಂತಾಗಿದೆ.ಆದ್ದರಿಂದ ಆದಷ್ಟು ಬೇಗನೆ ಸ್ವಚ್ಛತೆ ಕೈಗೊಳ್ಳಬೇಕೆಂದು ತಿಳಿಸಿದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ವಾರ್ಡ ಜನರ ಜನರ ಸಮಸ್ಯೆಗಳನ್ನು ಅರಿಯಲು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇವಲ ನಿಮ್ಮ ಸಮಸ್ಯೆಗಳನ್ನು ಆಲಿಸಿ ಹೋದರೆ ಜನಸ್ಪಂದನ ಕಾರ್ಯಕ್ರಮವಾಗುವುದಿಲ್ಲ.ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸಿದರೇ ಅದು ಜನಸ್ಪಂದನವಾಗುತ್ತದೆ,ಆ ನಿಟ್ಟಿನಲ್ಲಿ ನಗರಸಭೆಯೂ ಜನರ ಸಮಸ್ಯೆಗಳನ್ನು ಬಗೆಹರಿಸುತ್ತದೆ.ಅಲ್ಲದೇ ಇ-ಖಾತೆ ಬಗ್ಗೆ ನೀಡುವ ಬಗ್ಗೆ ಸಭೆ ನಡೆಸಿ ಆಲೋಚನೆ ಮಾಡಿ ಕ್ರಮಕೈಗೊಳ್ಳುತ್ತೆವೆ ಎಂದರು.

ನಗರಸಭೆ ಸದಸ್ಯರಾದ ತಿಪ್ಪಣ್ಣ ನಾಟೀಕಾರ, ಶ್ವೇತಾ ನಾಟೀಕಾರ, ಎಇಇ ಶರಣು ಪೂಜಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here