ಎರಡನೇ ದಿನಕ್ಕೆ ಕಾಲಿಟ್ಟ ಶಾಸಕರ ನಗರದ ಪರಿಯಟಣೆ

0
95

ಸುರಪುರ: ಗಾಂಧಿಜಿ ಅವರ ೧೫೦ ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಬುಧವಾರ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಮ್ಮಿಕೊಂಡಿದ್ದ ಪಾದಯಾತ್ರೆಯು ಎರಡನೆ ದಿನಕ್ಕೆ ಕಾಲಿಟ್ಟಿದೆ ಪ್ರತಿ ಬಡಾವಣೆಯಲ್ಲು ಸಮಸ್ಯಗಳ ಮಹಾಪುರವೆ ಹರಿದು ಬಂದಿದೆ ಸರ್ವೆ ಸಾಮಾನ್ಯವಾಗಿ ಹಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆ, ರಸ್ತೆಗಳ ದುರಸ್ಥೀಕರಣ ಮತ್ತು ಅಗಲಿಕರಣದ ಮತ್ತು ಸ್ಟ್ರೀಟ ಲೈಟನ ಸಮಸ್ಯೆಗಳು ಕಂಡುಬಂದವು.

ಸತ್ಯಂಪೇಟ ಬಡಾವಣೆಯ ಎರಡುವಾರ್ಡಗಳಲ್ಲಿ ಚರಂಡಿ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ನಗರಸಭೆ ವ್ಯಾಪ್ತಿಯಲ್ಲಿ ಬಂದು ಹಲವು ವರ್ಷವಾದರು ನಗರಸಭೆ ಅಧಿಕಾರಿಗಳು ವಾರ್ಡಗಳಿಗೆ ಕಸವಿಲೆವಾರಿ ಮತ್ತು ಚರಂಡಿಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಕರು ಮನವಿಯನ್ನು ಸಲ್ಲಿಸಿದರು.ಇನ್ನು ದಿವಳಗುಡ್ಡ ವಾರ್ಡನಲ್ಲಿ ಕುಡಿಯುವ ನೀರಿನ ತೊಂದರೆ ವ್ಯಾಪಕವಾಗಿ ಕಾಡುತ್ತಿದೆ ಸಾರ್ವಜನಿಕರು ಹಲವುಬಾರಿ ನಗರಸಭೆ ಅಧಿಕಾರಿಗಳಗಮನಕ್ಕೆ ತಂದರು ಯಾವುದೆ ರೀತಿಯ ಪರಿಹಾರ ಕಂಡಿಲ್ಲ ತಾತ್ಕಾಲಿಕವಾಗಿ ಟ್ಯಾಂಕರ ಮುಖಾಂತರ ನೀರು ಸರಬರಾಜು ಮಾಡಲು ತಿಳಿಸಿದರು ಸಹ ಯಾವುದೆ ಪ್ರಯೋಜನವಾಗಿಲ್ಲ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯಯನ್ನು ಬಗೆಹರಿಸಲು ಮನವಿ ಮಾಡಿಕೊಂಡರು, ರಂಗಂಪೇಟ ಮತ್ತು ತಿಮ್ಮಾಪುರ ವಾರ್ಡಗಳಲ್ಲಿ ರಸ್ತೆ ಸಮಸ್ಯೆಯು ವ್ಯಾಪಕವಾಗಿದೆ ವಾಹನಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ರಂಗಂಪೇಟ ಮಾರ್ಕಟ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ ಇದನ್ನು ರಸ್ತೆ ದುರಸ್ಥಿ ಮಾಡಲು ಹಲವಾರುಬಾರಿ ಮನವಿ ಮಾಡಿದರು ಸಹ ಸ್ಪಂದನೆ ಸಿಗುತ್ತಿಲ್ಲವೆಂದು ಜನರು ತಮ್ಮ ಅಳನ್ನು ತೊಡಿಕೊಂಡರು.

Contact Your\'s Advertisement; 9902492681

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳನ್ನು ಪರಿಹರಿಸುವ ದೃಷ್ಠಿಯಿಂದ ಈಗಾಗಲೆ ಒಂದು ತಂಡವನ್ನು ರಚನೆಮಾಡಲಾಗಿದೆ ತಂಡವು ಕ್ಷೇತ್ರದ ಪ್ರತಿಗ್ರಾಮಗಳಿಗೆ ತೆರಳಿ ಅಲ್ಲಿಯ ಸಮಸ್ಯಗಳಿಗೆ ಯಾವ ರೀತಿಯಾಗಿ ಪರಿಹಾರನೀಡುವ ಕುರಿತು ವರದಿಯನ್ನು ತಯಾರಿಸುತ್ತಿದ್ದಾರೆ ಅದರಂತೆ ತಾಲೂಕಿನ ಪ್ರತಿ ಗ್ರಾಮದಲ್ಲಿರುವ ಮೂಲಭೂತಗಳ ಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಜಿಪಂ ಮಾಜಿ ಸದಸ್ಯ ಸುರೇಶ ಸಜ್ಜನ, ಎಪಿಎಮ್‌ಸಿ ಸದಸ್ಯ ದುರ್ಗಪ್ಪ ಗೋಗಿಕೇರಾ, ನಗರಸಭೆ ಸದಸ್ಯ ಮಹ್ಮದ ಗೌಸ್, ಮುಖಂಡರಾದ ದೊಡ್ಡದೇಸಾಯಿ, ಪ್ರಕಾಶ ಸಜ್ಜನ, ರಾಜುಪುಲ್ಸೆ, ಪೌರಾಯುಕ್ತ ಬಸವರಾಜ ಶಿವಪೂಜೆ, ಎಈಈ ಗುಪ್ತಾ ಸೇರಿದಂತೆ ನಗರಸಭೆಯ ಸದಸ್ಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here