ಮಹಾ ಪುರಾಣ ಮಹಾಮಂಗಲ, ಜಾತ್ರಾ ಮಹೋತ್ಸವ

0
45

ಕಲಬುರಗಿ: ತಾಜ ಸುಲ್ತಾನಪೂರ ರಸ್ತೆಯಲ್ಲಿರುವ ಕಮಲನಗರದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನೂತನ ಶಿಖರ ಹಾಗೂ ಕಳಸಾರೋಹಣ ಕಾರ್ಯಕ್ರಮ ಅಂಗವಾಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮಹಾ ಪುರಾಣ ಮಹಾಮಂಗಲ ಹಾಗೂ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಚಿಣಮಗೇರಾ ಸಂಸ್ಥಾನ ಮಠದ ಶ್ರೀ ಷ.ಬ್ರ. ವೀರಮಹಾಂತ ಶಿವಾಚಾರ್ಯರು ಅವರು ಉದ್ಘಾಟಿಸಿದರು.

ಶ್ರೀ ಷ.ಬ್ರ.ಸಿದ್ದರಾಮ ಶಿವಾಚಾರ್ಯರು, ಪರಮಪೂಜ್ಯ ಶ್ರೀ ಶಿವಯೋಗಿ ಸಿದ್ದಾ ರೂಢ ಮಹಾಸ್ವಾಮಿಜಿ, ಖ್ಯಾತ ಉದ್ದಿಮೇದಾರ ವಿಕಾಶ ಆರ್. ಪಾಟಕ (ಸೋನು ಪಟೇಲ್), ಕಾಂಗ್ರೇಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶರಣು ಎ.ಪಾಟೀಲ, ಎಎಸ್‍ಐ ಸಂತೋಷ ಎಲ್, ಗ್ರಾಮ ಪಂಚಾಯತ್ ಸದಸ್ಯ  ಹೊನ್ನಪ್ಪ  ಜಮಾದಾರ ಸೇರಿದಂತೆ ಸಮಸ್ತ ಸದ್ಭಕ್ತ ಮಂಡಳಿದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here