ಸೇಡಂ: ನೀರಿನಲ್ಲಿ ಮುಳುಗಿ ಮೃತ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ನೀಡಿ

0
33

ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ  ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 3 ಎಕ್ಕರೆ  ಜಮೀನು ಸರ್ಕಾರದಿಂದ ಕೊಡಿಸುವ ವ್ಯವಸ್ಥೆ ಆಗಲಿ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧ್ಯಕ್ಷರಾದ ಗುಂಡಪ್ಪ ಸಳಂಕೆ ಒತ್ತಾಯಿಸಿದ್ದಾರೆ.

ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ರವರ ಆದೇಶದಂತೆ ಮೃತರ ಮನೆಗೆ ಭೇಟಿ ನೀಡಿ ನಿಗಮದಿಂದ  ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿ, ಸೂಕ್ತ ಪರಿಹರ ಸರಕಾರದಿಂದ ಒದಗಿಸಬೇಕೆಂದು ಜಿಲ್ಲಾ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ನಂತರ ಶಹಾಬಾದ್ ನಗರಕ್ಕೆ ಭೇಟಿ ನೀಡಿ ನಾಯಿಗಳ  ಅಲ್ಲೇಗೆ ಒಳಗಾದ ಬಾಲಕಿ ಕುಮಾರಿ ದೀಪಾಲಿ ಮತ್ತು ಬಾಲಕ ಮಲ್ಲಿಕಾರ್ಜುನ್ ಮನೆಗೆ ಭೇಟಿ ನೀಡಿ ಪರಿಶೀಲಿಸಿ ನಿಗಮದಿಂದ ಸಹಕಾರ ಕೊಡಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ  ರಾಮಯ್ಯ ಪೂಜಾರಿ ,ವಿಠಲ ನೆಲೋಗಿ ಶಾಬಾದ್ ನಗರಧ್ಯಕ್ಷರಾದ ರಾಜು ಮೇಸ್ತ್ರಿ, ರಮೇಶ್  ಪವಾರ, ಶ್ರೀನಿವಾಸ್ ನೆದಲಗಿ, ಸಂಜು ವಿಟಕರ, ಶಿವಕಾಂತ್ ಮಾನೆ ಸಿದ್ದರಾಮ ಕುಶಾಳೆ, ನಾಗರಾಜ್ ಕುಸಳೆ, ಬಸವರಾಜ್ ಕಣದಾಳ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here