ಬಸವೇಶ್ವರ ಸಮಾಜ ಸೇವಾ ಬಳಗ: ಸ್ವಯಂ ಅರಿವಿನಿಂದ ಮಾನಸಿಕ ನೆಮ್ಮದಿ ಸಾಧ್ಯ

0
37

ಕಲಬುರಗಿ: ಇಂದಿನ ಆಧುನಿಕ ಒತ್ತಡ ಬದುಕಿನಲ್ಲಿ ಮಾನವ ಜೀವನ ಸಾಗಿಸುತ್ತಿದ್ದು, ಇತಿ-ಮಿತಿಯಲ್ಲಿ ಬಾಳದೇ, ತನ್ನಲ್ಲಿರುವ ಅರಿವನ್ನು ಮರೆತು ಅನುಕರಣೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಕೊರೆತೆಯನ್ನು ಎದುರಿಸುತ್ತಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಅರಿವಿನ ಮೂಲಕ ಮಾನಸಿಕ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆಯೆಂದು ಖ್ಯಾತ ಮನೋರೋಗ ತಜ್ಞ ಡಾ.ಅಲೋಕ ಘನಾತೆ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ’ಘನಾತೆ ಮನೋರೋಗ ಕ್ಲಿನಿಕ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯ ಪ್ರಯುಕ್ತ ಬಳಗದ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು. ಆಧುನಿಕ ಜೀವನ ಶೈಲಿ, ಕೊರತೆ, ಕೌಟುಂಬಿಕ ತೊಂದರೆ,ಒತ್ತಡದ ಬದುಕು, ಮೌಢ್ಯತೆ, ಕೆಟ್ಟ ಅಭ್ಯಾಸಗಳಂತಹ ಅನೇಕ ಕಾರಣಗಳಿಂದ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ. ಇದರಿಂದ ಇತ್ತೀಚಿನ ಕೆಲ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಜನರ ಆತ್ಮ ಹತ್ಯೆಯ ಪ್ರಮಾಣ ಹೆಚ್ಚಾಗಿದೆ. ವಾಸ್ತವಿಕತೆಯ ಮೇಲೆ ಜೀವನ ಸಾಗಿಸುವುದು, ಮೆದುಳಿನ ಸಂಪೂರ್ಣ ಬಳಕೆ,ಸೂಕ್ತ ಮಾರ್ಗದರ್ಶನ ಪಡೆದು ಇದರಿಂದ ಹೊರಬರಬೇಕೆಂದರು.

Contact Your\'s Advertisement; 9902492681

ಇತ್ತೀಚಿಗೆ ನಮ್ಮ ದೇಶದಲ್ಲಿ ಪ್ರತಿ ೪೦ ಸೆಕೆಂಡಿಗೆ ಆತ್ಮಹತ್ಯೆ ಜರುಗುತ್ತಿರುವ ಸಂಗತಿ ವಿಷಾಧನೀಯವಾಗಿದೆ. ಇದರಲ್ಲಿ ಶೇ.೯೦ರಷ್ಟು ಪ್ರಕರಣಗಳು ಮನೋವ್ಯಾದಿಗಳಾಗಿವೆ. ಇದಕ್ಕೆ ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ದೂರವಿರಿ. ಗೊಂದಲಕ್ಕೆ ಆಸ್ಪದ ನೀಡಬೇಡಿ. ಸತ್ಸಂಗ, ಧ್ಯಾನ, ಯೋಗ, ವ್ಯಾಯಾಮ, ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಸಮಸ್ಯೆಗಳ ನಿರ್ವಹಣಾ ಕೌಶಲ್ಯ ಬೆಳೆಸಿಕೊಳ್ಳುವುದು ಮನಸ್ಸನ್ನು ನಿಯಂತ್ರಣದಲ್ಲಿಡುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾನಸಿಕ ರೋಗಕ್ಕೆ ತುತ್ತಾಗಂತೆ ಇರಲು ಸಾಧ್ಯವಿದೆಯೆಂದು ಅನೇಕ ಸಲಹೆಗಳನ್ನು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ವ್ಯಕ್ತಿ ತನ್ನ ಸಾಮರ್ಥ್ಯ, ಇತಿ-ಮಿತಿಗಳನ್ನು ಅರಿಯದೇ ಎಲ್ಲವೂ ಪಡೆಯಬೇಕೆಂಬ ದುಸ್ಸಾಹಸಕ್ಕೆ ಕೈಹಾಕಿರುವದರಿಂದ ಮಾನಸಿಕವಾಗಿ ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಇದರಿಂದ ದೈಹಿಕ, ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ.ವಾಸ್ತವಿಕ ಜೀವನವನ್ನು ಅವಲೋಕಿಸಬೇಕು.,ಆತ್ಮವಿಶ್ವಾಸ,ಸಕಾರಾತ್ಮಕ ಚಿಂತನೆಯಂತಹ ವಿಧಾನಗಳನ್ನು ಅಳವಡಿಸಿಕೊಂಡು, ಮಾನಸಿಕ ಅಶಾಂತಿಗೆ ಅನವು ಮಾಡಿಕೊಡದೇ, ಸುಖ,ಸಂತೋಷ,ನೆಮ್ಮದಿಯಿಂದ ಬದುಕು ಸಾಗಿಸುವ ಮೂಲಕ ಮಾನಸಿಕ ರೋಗ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಬೇಕಾಗಿದೆಯೆಂದು ತುಂಬಾ ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಕಲ್ಯಾಣಕುಮಾರ ಶೀಲವಂತ, ಪ್ರೊ.ಎಸ್.ಕೆ. ಕಲ್ಯಾಣರಾವ, ಅಮರ ಬಂಗರಗಿ, ಅಣ್ಣಾರಾವ ಮಂಗಾಣೆ,ರಾಜಕುಮಾರ ಬಟಗೇರಿ, ಅನಿಲಕುಮಾರ ತಳವಾರ, ಭೀಮಾಶಂಕರ ಕುಂಬಾರ, ಸುನಿಲ ರಾಠೋಡ, ನಬಿಸಾಬ್, ಹರೀಶ ಶಹಾ, ಅರುಣಕುಮಾರ ನಾಟಿಕಾರ ಸೇರಿದಂತೆ ಬಳಗದ ಸದಸ್ಯರು, ಕ್ಲಿನಿಕ್‌ನ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here