ಇಂದು ಶ್ರಮಿಸಿದರೆ ಮುಂದಿನ ಸುಖ ಜೀವನಕ್ಕೆ ದಾರಿದೀಪ

0
23

ಕಲಬುರಗಿ: ಇಂದಿನ ಮಕ್ಕಳು ಬಹಳ ಕಷ್ಟಪಟ್ಟು ಇಂತಹ ಸ್ಪರ್ಧಾ ಯುಗದಲ್ಲಿ ಶ್ರಮ ಪಟ್ಟು ಓದಿದರೆ ಮುಂದಿನ ನಿಮ್ಮ ಜೀವನಕ್ಕೆ ದಾರಿದೀಪವಾಗುವುದೆಂದು ಐಎಎಸ್ ಅಧಿಕಾರಿ ಮತ್ತು ಗೃಹ ಮಂಡಳಿ ಆಯುಕ್ತರಾದ ಶ್ರೀ ಕವಿತಾ ಮನ್ನಿಕೇರಿಯವರು ಹೇಳಿದರು.

ಅವರು ಜಿಲ್ಲಾ ಗಾಣಿಗ ಸಮಾಜ ನೌಕರರ ಸಂಘ ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಸನ್ಮಾನಿಸಿ ಮಾತನಾಡುತ್ತಾ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ಕಷ್ಟ ಪಟ್ಟರೆ ಮುಂದೆ ನಾವು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆದು ಸುಖಕರವಾದ ಜೀವನವನ್ನು ನಡೆಸಬಹುದು ಇಲ್ಲದೇ ಹೋದರೆ ಜೀವನದಲ್ಲಿ ಬಹಳ ಹೇಳು ಬೀಳುಗಳನ್ನು ಕಾಣೋದಲ್ಲದೆ ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಇಂದಿನ ಸ್ಪರ್ಧಾ ಯುಗದಲ್ಲಿ ನಾವು ಎಷ್ಟೇ ಕಷ್ಟಪಟ್ಟು ಶ್ರಮಿಸಿ ಓದಿದರೂ ಅದು ಕಡಿಮೆ ಆದ್ದರಿಂದ ನಮ್ಮ ಸಮಾಜದ ಮಕ್ಕಳು ಬಹಳ ಶ್ರಮವಹಿಸಿ ಈಗ ಶ್ರಮಪಟ್ಟರೆ ಮುಂದೆ ನಿಮಗೆ ಸುಖಕರ ಜೀವನ ಸಿಗಲಿದೆ ಎಂದು ಹೇಳಿದರು.

Contact Your\'s Advertisement; 9902492681

ವೇದಿಕೆ ಮೇಲೆ ಅಸಿನ ರಾಧ ಸಮಾಜದ ಇನ್ನೊಬ್ಬ ಅತಿಥಿಗಳಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲ ಸಚಿವರಾದ ರುದ್ರಗೌಡ ಬಿರಾದಾರವರು ಮಾತನಾಡುತ್ತಾ ನಮ್ಮ ಸಮಾಜ ಇನ್ನೂ ಬಹಳ ಹಿಂದುಳಿದಿದೆ ಅದಕ್ಕೆ ಮುಂದೆ ತರಲು ಶಿಕ್ಷಣ ಬಹಳ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಇನ್ನೋರ್ವ ಅತಿಥಿಗಳಾದ ಸೇಡಂನ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುನಿಲ್ ಬಾವಿಕಟ್ಟಿ ಮಾತನಾಡುತ್ತಾ ಮಕ್ಕಳು ಗುರಿ ಇಟ್ಟುಕೊಂಡು ಪರಿಶ್ರಮ ಪಟ್ಟರೆ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಪೋಲಿಸ್ ಪಾಟೀಲ್ ಅವರು ಮಾತನಾಡುತ್ತಾ ನಮ್ಮ ಸಮಾಜ ಇನ್ನೂ ಬಹಳ ಹಿಂದುಳಿದಿದೆ ಅದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಎಂದರು.

ಆದಕಾರಣ ಸಮಾಜ ಬಾಂಧವರು ಯಾರು ಅನ್ಯತಾ ಭಾವಿಸದೆ ಸಮಾಜದಲ್ಲಿ ಬೆಳೆಯುವ ವ್ಯಕ್ತಿಯನ್ನು ನಾವೆಲ್ಲರೂ ಕೂಡಿ ಪ್ರೋತ್ಸಾಹಿಸಿದರೆ ಸಮಾಜ ಮುಂದೆ ಬರಲು ಸಾಧ್ಯ ಎಂದು ಹೇಳಿದರು.

ಉದ್ಘಾಟನೆಯನ್ನು ಆಳೂರು ಸಿದ್ದಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು ನೆರವೇರಿಸಿದರು
ವೇದಿಕೆಯ ಮೇಲೆ ಸಮಾಜದ ಹಿರಿಯರಾದ ಅಪ್ಪಾರಾಯ ಗೌಡ ಮಾಲಿ ಪಾಟೀಲ್ ಅತ್ನೂರ್, ಮಲ್ಲಿನಾಥ ಗೌಡ ಪಾಟೀಲ ಯಲಗೋಡ, ದೇವೇಂದ್ರ ಎಸ್ ಬಿರಾದಾರ್ ಮತ್ತು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಶರಣು ಬಿಲ್ಲಾಡ್, ಮತ್ತು ಆಡಳಿತ ಮಂಡಳಿಯ ಸದಸ್ಯರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here