ರೈತರಿಗೆ ಸಾಲನೀಡುವಲ್ಲಿ ವಿಳಂಬನೀತಿಗೆ ಖಂಡನೆ

0
30

ಸುರಪುರ: ಮುದಲೆ ಈ ಬಾಗದಲ್ಲಿ ಬರ ನೆರೆಯಿಂದ ರೈತರು ಸಂಕಷ್ಟದಲ್ಲಿದ್ದು ಇತಂಹ ಪರಿಸ್ಥಿತಿಯಲ್ಲಿ ಡಿಸಿಸಿ ಬ್ಯಂಕ ಅಧಿಕಾರಿಗಳಿ ಕಳೆದ ೧೪ ತಿಂಗಳ ನಿಂದ ರೈತರಿಗೆ ಸಾಳನೀಡುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಕೋಡಲೆ ಒಂದು ದಿನಾಂಕವನ್ನು ನಿಗದಿಗೊಳಿಸಿ ರೈತರಿಗೆ ಸಾಲನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕರ ಆಗ್ರಹಿಸಿದರು.

ನಗರದ ಜಿಲ್ಲಾ ಸಹಕಾರ ಕೇಂದ್ರ ನಗರ ಶಾಖೆಯ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಈ ಹಿಂದೆ ಪ್ರತಿಭಟನೆ ನಡೆಸಿದಾಗ ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿಗಳು ಒಂದು ತಿಂಗಳಲ್ಲಿ ಸದಸ್ಯತ್ವ ಹೊಂದಿರುವ ಎಲ್ಲಾ ರೈತರಿಗೆ ಒಂದು ತಿಂಗಳಲ್ಲಿ ಸಾಲ ನೀಡುವುದಾಗಿ ಭರವಸೆ ನೀಡಿದ್ದರು ಸಹ ಯಾವುದೆ ಕ್ರಮವಹಿಸಲಿಲ್ಲ ಹೀಗಾಗಿ ಸಾಲನೀಡುವ ದಿನಾಂಕವನ್ನು ಪ್ರಕಟಿಸುವವರೆಗು ಧರಣಿಯನ್ನು ನಡೆಸಲಾಗುವುದು ಎಂದರು.

Contact Your\'s Advertisement; 9902492681

ಸುಮಾರು ಬಾರಿ ಈ ವಾಚಾರವಾಗಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಮನವಿಸಲ್ಲಿಸಿದರು ಯಾವುದೆ ಉಪಯೋಗವಿಲ್ಲ ರೈತರಿಗೆ ಸಾಲ ನೀಡಲು ಆಗದ ಬ್ಯಾಂಕು ಇದ್ದರೆಷ್ಟು ಬಿಟ್ಟರೇಷ್ಟು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಯೊಳ್ಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಬರೆದ ಮನವಿಯನ್ನು ಜಿಲ್ಲಾ ಸಹಾಕಾರ ಕೇಂದ್ರ ನಗರ ಶಾಖೆ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಚಂದ್ರಾಮಗೌಡ, ಗುರಣ್ಣ ಸಾಹು, ಸೋಮಲಿಂಗಪ್ಪ ಬಿರಾದರ ರಫೀಕ ಸುರಪುರ ರಾಮಯ್ಯ ಆಲ್ಹಾಳ, ಶಿವರಾಜ ಕರಡ್ಡಿ, ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here