ಕಲಬುರಗಿ ಪ್ರಶಸ್ತಿ ಪಡೆದ ದಂಡೆ ದಂಪತಿಗೆ ಅಧಿಕೃತ ಆಮಂತ್ರಣ

0
134

ಕಲಬುರಗಿ: ಬಸವಣ್ಣನವರ ಕಾಯಕ ಭೂಮಿಯಾದ ಬಸವಕಲ್ಯಾಣದಲ್ಲಿ ವಿಶ್ವ ಬಸವ ದರ್ಮ ಅನುಭವ ಮಂಟಪ ಟ್ರಸ್ಟ್ ವತಿಯಿಂದ ನ.೨೩ ಮತ್ತು ೨೪ರಂದು ನಡೆಯಲಿರುವ ೪೦ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ೨ನೇ ದಿನ ಈ ಬಾರಿ ಡಾ. ಎಂ.ಎಂ.‌ಕಲ್ಬುರ್ಗಿ ಸಾಹಿತ್ಯ ಸಂಶೋಧನ ಪ್ರಶಸ್ತಿ ಪಡೆದ ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ದಂಪತಿಗೆ ಅವರ ನಿವಾಸದಲ್ಲಿ ಆಮಂತ್ರಣ ಪತ್ರಿಕೆ ನೀಡಿ ಉತ್ಸವಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.

ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಅಧ್ಯಕ್ಷ ರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೆವರು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧನರಾಜ ಟಿ, ಯುವ ಮುಖಂಡ ಶರಣು ಸಲಗರ, ರವೀಂದ್ರ ಶಾಬಾದಿ, ಶಿವರಂಜನ್ ಸತ್ಯಂಪೇಟೆ, ವಿಜಯಕಹಮಾರ ಪಾಟೀಲ ತೇಗಲತಿಪ್ಪಿ, ರಮೇಶ ಧುತ್ತರಗಿ, ನವಲಿಂಗ್ ಪಾಟೀಲ ಇತರರಿದ್ದರು.

Contact Your\'s Advertisement; 9902492681

ಬೀದರ್ ನ ಉದ್ಯಮಿಬಸವರಾಜ ಧನ್ನೂರ ಈ ಪ್ರಶಸ್ತಿಯ ದಾಸೋಹಿಗಳಾಗಿದ್ದು, ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಹೊಂದಿರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here