ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕಲಬುರಗಿಯಲ್ಲಿ ಎಸ್.ಡಿ.ಪಿ.ಐಯಿಂದ ಪ್ರತಿಭಟನಾ ರ್ಯಾಲಿ

0
92

ಕಲಬುರಗಿ: ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿಗೆ ವಿರೋಧಿ ವ್ಯಕ್ತಪಡಿಸಿ ಇಂದು ನಗರದಲ್ಲಿ ಎಸ್.ಡಿ.ಪಿ.ಐ ಪಕ್ಷದವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ನಗರದ ಮುಸ್ಲಿಂ ಚೌಕ್ ದಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಜಗತ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಎದುರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಡಾ. ರಿಜ್ವಾನ್ ಅಹ್ಮದ್ ಮಾತನಾಡಿ ರಾಷ್ಟ್ರೀಯ ಪೌರತ್ವ ಕಾಯ್ದೆ ಮುಸ್ಲಿಂಮ ವಿರುದ್ಧ ಬಳಸುತ್ತಿರುವ ಆಸ್ತ್ರವಾಗಿದ್ದು, ಇದರಿಂದ ದೇಶವನ್ನು ಒಡೆಯುವ ಹುನ್ನಾರ ಇದೆ ಎಂದು ಆರೋಪಿಸಿದರು. ಸಿ.ಎ.ಬಿ ವಿರುದ್ಧ ಪಕ್ಷ ರಾಷ್ಟ್ರಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಾಣ ನೀಡಲು ಸಿದ್ಧ ಆದರೆ ರಾಷ್ಟ್ರೀಯ ಪೌರತ್ವ ಮಸೂದೆಯನ್ನು ಒಪ್ಪಲ್ಲ ಹಾಗೂ ಬೈಕಟ್ ಸಿ.ಎ.ಬಿ ಎಂಬ ಘೋಷವಾಕ್ಯದ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷ ಹಾಗೂ ಸಂಘಟನೆಯ ಮುಖಂಡ ಎಜಾಜ್ ಅಹ್ಮದ್, ಅಲಿಂ ಇಲಾಹಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here