ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ

0
64

ಸುರಪುರ: ಮೂಲನಿವಾಸಿ ಅಂಬೇಡ್ಕರ ಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ಸುರಪುರದ ಹೋರಾಟಗಾರ ರಾಹುಲ್ ಹಲಿಮನಿಯವರನ್ನು ನೇಮಕಗೊಳಿಸಲಾಗಿದೆ.

ಈ ಕುರಿತು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಮುನಿಯಪ್ಪ ನೇಮಕಾತಿಗೊಳಿಸಿ ಆದೇಶ ಹೊರಡಿಸಿದ್ದು, ಸಂಘಟನಾತ್ಮಕ ವ್ಯಕ್ತಿತ್ವವುಳ್ಳ ನಿಮ್ಮ ದಲಿತ ಹಿಂದುಳಿದ ಸಮಾಜದ ಪರವಾದ ಸೇವೆಯನ್ನು ಮನಗಂಡು ನಾಡಿನ ದಲಿತ ಸಮುದಾಯದ ಏಳಿಗೆ ಮತ್ತು ಸಂವಿಧಾನಾತ್ಮಕ ಆಶಯಗಳ ಜಾರಿಯನ್ನು ಗಮನದಲ್ಲಿಟ್ಟುಕೊಂಡು ಹುಟ್ಟು ಹಾಕಿರುವ ಮೂಲನಿವಾಸಿ ಅಂಬೇಡ್ಕರ್ ಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ತಾವು ಕರ್ತವ್ಯ ನಿಭಾಯಿಸುವಿರೆಂಬ ನಂಬುಗೆಯ ಮೇಲೆ ನೇಮಕಗೊಳಿಸಿದ್ದು,ಸಂಘಟನೆಯ ದ್ಯೋಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಗೆ ಯಾವುದೆ ಕುಂದು ಬಾರದಂತೆ ಸಂಘಟನೆಯನ್ನು ಕಟ್ಟುವಲ್ಲಿ ಶ್ರಮವಹಿಸುವಂತೆ ತಿಳಿಸುತ್ತಾ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here