ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಬರಲು ಶ್ರೀಪ್ರಭು ದೇವರು ಆಹ್ವಾನ

0
60

ಸುರಪುರ: ಬಸವಸೇವಾ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವು ಬೀದರಿನ ಬಸವಗಿರಿಯಲ್ಲಿ ೧೨ನೇ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಬಸವಾಭಿಮಾನಿಗಳು ಆಗಮಿಸುವಂತೆ ತಿಳಿಸಿದರು.

ನಗರದ ನರಸಿಂಗಪೇಟೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಕಲ್ಯಾಣ ನಾಡಿನ ಬಸವಾದಿ ಶರಣರು ಮಾಡಿದ ಸಮಾನತೆಯ ಕ್ರಾಂತಿಯ ಹಿನ್ನೆಲೆಯಲ್ಲಿ ಪ್ರತಿವರ್ಷ ವಚನ ವಿಜಯೋತ್ಸವ ಆಚರಿಸಲಾಗುತ್ತಿದ್ದು,ಅದರಂತೆ ಈ ವರ್ಷ ಫೆಬ್ರವರಿ ೭,೮ ಮತ್ತು ೯ನೇ ತಾರೀಖು ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಅನುಭಾವಿಗಳು,ಸಾಹಿತಿ ಚಿಂತಕರು ಭಾಗವಹಿಸಲಿದ್ದಾರೆ.ಆದ್ದರಿಂದ ತಾಲೂಕಿನ ಎಲ್ಲಾ ಬಸವಾಭಿಮಾನಿಗಳು ಬರುವಂತೆ ಆಹ್ವಾನಿಸಿ ವಚನ ಗ್ರಂಥವನ್ನು ನೀಡಿದರು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ್ದ ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ ಮಾತನಾಡಿ,ಪ್ರತಿ ವರ್ಷವೂ ವಚನ ವಿಜಯೋತ್ಸವಕ್ಕೆ ತಾಲೂಕಿನ ಅನೇಕರು ಆಗಮಿಸುತ್ತಿದ್ದು ಅದರಂತೆ ಈ ವರ್ಷವು ನೂರಾರು ಸಂಖ್ಯೆಯಲ್ಲಿ ಜನರು ಬರುವುದಾಗಿ ತಿಳಿಸಿದರು.ಅಲ್ಲದೆ ಕಲ್ಯಾಣ ಕ್ರಾಂತಿ ಎಂಬುದು ಸಮಾನತೆಗಾಗಿ ನಡೆದ ಕ್ರಾಂತಿಯಾಗಿದ್ದು ಅಂತಹ ಹನ್ನೆರಡನೆ ಶತಮಾನದ ಆ ನೆನಪನ್ನು ಮರುಕಳಿಸಲು ಬಸವಸೇವಾ ಪ್ರತಿಷ್ಠಾನ ಪ್ರತಿ ವರ್ಷ ನಡೆಸುವ ಕಾರ್ಯಕ್ರಮ ನಾಡಿನ ಹೆಮ್ಮೆಯ ಕಾರ್ಯಕ್ರಮವಾಗಿದೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರು ಭಾಗವಹಿಸುವುದಾಗಿ ತಿಳಿಸಿ ವಚನದ ಕಟ್ಟನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಂಬ್ರೇಶ ದೇಸಾಯಿ ದೇವಾಪುರ,ಚೆನ್ನಬಸವ ವಾಲಿ,ನಾಗಭೂಷಣ ಯಾಳಗಿ,ಸಿದ್ದಣ್ಣ ಸಾಹುಕಾರ,ಬಸವರಾಜ ಅಮ್ಮಾಪುರ,ಮಲ್ಲು ಬಾದ್ಯಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here