ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಬೆಳಸಿ: ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು

0
40

ಕುಣಿಗಲ್ : ತಂದೆ ತಾಯಂದರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ನಮ್ಮದೇಯಾದ ಸಂಸ್ಕಾರ ಸಂಸ್ಕೃತಿಯನ್ನು  ಬೆಳೆಸಬೇಕು,  ಇಲ್ಲದಿದ್ದರೆ ನಿಮ್ಮ ಮಕ್ಕಳು ನಮ್ಮಿಂದ ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಪೋಷಕರಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಯಡಿಯೂರು ಹೋಬಳಿ ಕಗ್ಗೆರೆ ತೋಂಟದ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಎರಡನೇ ವರ್ಷದಶ್ರೀ ಸಿದ್ದಲಿಂಗೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ  ಆಶೀರ್ವಚನ ನೀಡಿದ ಶ್ರೀಗಳು ಇತ್ತೀಚಿನ ದಿನಗಳಲ್ಲಿವಿದ್ಯಾಭ್ಯಾಸದ ಜೊತೆಗೆ ಬೆಳೆದು ನಿಂತಿರುವ ಮಕ್ಕಳು  ಪೋಷಕರಿಂದ  ದೂರವಾಗು ತ್ತಿರುವುದನ್ನು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಸಂಸ್ಕಾರ ಸಂಸ್ಕೃತಿ ಎಂಬುದನ್ನು ಮರೆಯ ಬಾರದು ಎಂದರು.

Contact Your\'s Advertisement; 9902492681

ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪ್ರೀತಿ ವಿಶ್ವಾಸಗಳನ್ನು ತುಂಬಬೇಕು ಅಪ್ಪ ಅಮ್ಮ ಎಂಬ ಭಾವನೆ ಬರುವ ರೀತಿಯಲ್ಲಿ ಮಕ್ಕಳನ್ನು ಬೆಳೆಸಿ ಪೋಷಣೆ ಮಾಡಬೇಕು ಎಂದ ಅವರು ಕುಟುಂಬದ ತಾಯಿ ಮನಸ್ಸು ಮಾಡಿದರೆ ಕುಟುಂಬ ಉದ್ದಾರ ಆಗುತ್ತದೆ ಇದರ ಜೊತೆಯಲ್ಲಿ ಸಮಾಜವೂ ಉದ್ಧಾರವಾಗು ವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಇತ್ತೀಚಿನ ಯುವಕರು ಹೆಚ್ಚು ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ ಆದರೆ ತಂದೆ ತಾಯಿಯಿಂದದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ನೀವು ಎಷ್ಟೇ ವಿದ್ಯಾವಂತರಾಗಿ, ಹಣವಂತರಾಗಿ, ನೀವು ನಿಮ್ಮ ಹಿರಿಯರ ಸೇವೆ ಮಾಡದಿದ್ದರೆ ನಿಮ್ಮ ಮಕ್ಕಳು ನಿಮ್ಮ ಸೇವೆಯನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂಬುದನ್ನು ಮರೆಯ ಬಾರದು ಎಂದು ಎಚ್ಚರಿಸಿದರು. ಮನುಷ್ಯನಾದವನಿಗೆ ಹಣಕ್ಕಿಂತ ಹೃದಯ ಶ್ರೀಮಂತಿಕೆ ಇರಬೇಕು ಎಂದ ಅವರು ಶ್ರೀ ತೋಂಟದ ಸಿದ್ಧಲಿಂಗೇಶ್ವರರು ನಡೆದು ಬಂದಂತಹ ದಾರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.ಬಸವಣ್ಣನವರು ತತ್ತ್ವ ಸಿದ್ಧಾಂತಗಳನ್ನು ಧಾರ್ಮಿಕ ಸಂಸ್ಕೃತಿಯನ್ನು ಜನರಿಗೆ ತಲುಪಿಸಿದರೀತಿಯಲ್ಲಿ ತಪಸ್ವಿ ಸಿದ್ದಲಿಂಗೇಶ್ವರರುಒಬ್ಬರು ಎಂದರು.

ಇದೇ ರೀತಿ ಶ್ರೀ ಸಿದ್ದಲಿಂಗೇಶ್ವರರ   ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಭಕ್ತರಿಗೆ ಕರೆ ನೀಡಿದರು.  ಮುಂದಿನ 2021 ನೇ ಜನವರಿ ತಿಂಗಳಲ್ಲಿ ಮಾಗಡಿ ಕೆಂಪೇಗೌಡರ ಪಟ್ಟಣದಲ್ಲಿ ಶ್ರೀ ಸಿದ್ದಲಿಂಗೇಶ್ವರರ ಜಯಂತಿಯನ್ನುಎಲ್ವಿ ಟ್ರಾವೆಲ್ಸ್ ನ  ಪರಮಶಿವಯ್ಯನವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದರು.

ಶ್ರೀ ಸಿದ್ದಲಿಂಗೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕಗ್ಗೆರೆಯಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟ ಜಯಂತ್ಯುತ್ಸವ ಸಮಿತಿಯ ಪ್ರತಿಯೊಬ್ಬ ಸಂಚಾಲಕರಿಗೆ ಅಭಿನಂದನೆ ಸಲ್ಲಿಸಿದರು.      .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here