ಕಾಡಾನೆ ದಾಳಿ ಕೂಲಿ ಕೆಲಸಕ್ಕೆ ಬಂದ ವ್ಯಕ್ತಿ ಸಾವು

0
64

ಮೈಸೂರು: ರಾತ್ರೋರಾತ್ರಿ ಬೆಳೆ ಹಾನಿಗೆ ಬಂದಿದ್ದ ಕಾಡಾನೆಗಳನ್ನು ರೈತರು ಓಡಿಸುವಾಗ ಕಾಡಾನೆ ದಾಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ರಾಯಚೂರು ಮೂಲದ ವ್ಯಕ್ತಿ ಸಾವನಪ್ಪಿರುವ ಘಟನೆ ಸಂಭವಿಸಿದೆ.

ರಾಯಚೂರು ಜಿಲ್ಲೆ ಕಕ್ಕೇರಿ ಗ್ರಾಮದ ಹನುಮಂತಪ್ಪ (50) ಮೃತ ವ್ಯಕ್ತಿ. ಎಚ್.ಡಿ.ಕೋಟೆ ತಾಲೋಕಿನ ಹೈರಿಗೆ ಮಾದಾಪುರದಲ್ಲಿ ಕಾಂಕ್ರೀಟ್ ಕೆಲಸಕ್ಕೆ ರಾಯಚೂರಿನಿಂದ 8 ಮಂದಿ ಕೂಲಿ ಕಾರ್ಮಿಕರು ಮೈಸೂರಿಗೆ ಆಗಮಿಸಿದ್ದರು. ಇಂದು ಬೆಳಿಗ್ಗೆ ಮುಂಜಾನೆ ಕೆಲಸದಲ್ಲಿ ತಲ್ಲೀನರಾಗಿದ್ದಾಗ ಹಠಾತ್ ದಾಳಿ ನಡೆಸಿ ಕಾಡಾನೆ ಕಾಲಿನಿಂದ ತುಳಿದ ಪರಿಣಾಮ ಹನುಮಂತಪ್ಪ ಸಾವನಪ್ಪಿದಾನೆಂದು ತಿಳಿದುಬಂದಿದೆ.

Contact Your\'s Advertisement; 9902492681

ಎರಡು ದಿನಗಳಿಂದ ಕೂಲಿ ಕೆಲಸದಲ್ಲಿ ತಲ್ಲಿನಾಗಿದ  ಎಚ್.ಡಿ.ಕೋಟೆ ತಾಲೋಕಿನ ಹೈರಿಗೆ ಮಾದಾಪುರ ಸಮೀಪ ರಾತ್ರೋರಾತ್ರಿ ಬೆಳೆ ಹಾನಿಗೆ ಬಂದಿದ್ದ ಕಾಡಾನೆಗಳನ್ನು ರೈತರು ಓಡಿಸುವಾಗ ಸಂಭವಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here