ಕಲಬುರಗಿ ಕನ್ನಡ ಭವನದ ಪಕ್ಕದ ಕಾಂಪೌಂಡ್ ಮೇಲಿನ ಗೋಡೆಯ ಮೇಲೆ “ಸಾಹಿತ್ಯೆ”  ಸಮ್ಮೇಳನ ಬರಹದ ಎಡವಟ್ಟು!

0
84

ಕಲಬುರಗಿ: ಫೆ. ೫,೬ ಮತ್ತು ೭ರಂದು ಕಲಬುರಗಿಯ ಗುಲ್ಬರ್ಗ ವಿವಿ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಕಟ್ಟಡ ಹಾಗೂ ಕಾಂಪೌಂಡ್ ಗಳಿಗೆ ಗೋಡೆ ಬರಹ ಬರೆಯಲಾಗುತ್ತಿದೆ.

“ಸಾಹಿತ್ಯ”ಅಂತ ಈ ರೀತಿಬರೆಯದೆ, ಈ ಕೆಳಕಂಡಂತೆ ಬರೆಯಲಾಗಿದೆ. ಆದರೆ ನಗರದ ಕನ್ನಡ ಭವನದ ಪಕ್ಕದ ಗೋಡೆಯ ಮೇಲೆ ಸಾಹಿತ್ಯ ಸಮ್ಮೇಳನ ಬದಲಿಗೆ “ಸಾಹಿತ್ಯೆ” ಎಂದು ಬರೆಯಲಾಗಿದೆ.

Contact Your\'s Advertisement; 9902492681

ಈ ಅಂಶವನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪದಾಧಿಕಾರಿಗಳಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಯವರು ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಹಾಕಿ ಏನಿದು? ಎಂದು ಪ್ರಶ್ನಿಸಿದ್ದಾರೆ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here