ಹೆಳವರ ಸಂಘದ ನೂತನ ಪದಾಧಿಕಾರಿಗಳ ನೇಮಕ: ಡಾ. ಹಣಮಂತ ಹಳಿಸಗರ

0
71

ಸುರಪುರ: ನಮ್ಮ ಹೆಳವ ಸಮಾಜದ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲರು ಸಂಘಟಿತರಾಗುವುದು ಮುಖ್ಯವಾಗಿದೆ.ಆದ್ದರಿಂದ ಇಂದು ಹೆಳವರ ಸಂಘದ ನೂತನ ತಾಲೂಕು ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಎಂದು ಹೆಳವ ಸಮಾಜದ ಜಿಲ್ಲಾಧ್ಯಕ್ಷ ಡಾ. ಹಣಮಂತ ಹಳಿಸಗರ ಮಾತನಾಡಿದರು.

ನಗರದ ಪ್ರಭು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ತಾಲೂಕಿನಲ್ಲಿರುವ ಎಲ್ಲ ಹೆಳವ ಸಮುದಾಯದ ಬಂಧುಗಳಿಗೆ ಭೇಟಿ ನೀಡಿ ಸಂಘಟನೆಯನ್ನು ಬಲಪಡಿಸೋಣ ಹಾಗು ಸರಕಾರದಿಂದ ಸಮುದಾಯದ ಅಭಿವೃಧ್ಧಿಗಾಗಿ ಹೋರಾಟ ಮಾಡೋಣ ಎಂದರು.

Contact Your\'s Advertisement; 9902492681

ನಂತರ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಗೌರವಾಧ್ಯಕ್ಷರಾಗಿ ರಾಮಣ್ಣ ಸತ್ಯಂಪೇಟೆ, ಅಧ್ಯಕ್ಷರಾಗಿ ಮಲ್ಲಪ್ಪ ಕೆಂಭಾವಿ,ಉಪಾಧ್ಯಕ್ಷ ದೇವಪ್ಪ ಮಂಗಳೂರು,ಪ್ರಧಾನ ಕಾರ್ಯದರ್ಶಿ ಅಂಬ್ರೇಶ ಹೆಗ್ಗಣದೊಡ್ಡಿ,ಖಜಾಂಚಿ ಪರಶುರಾಮ ದೇವಿಕೇರಿಯವರನ್ನು ನೇಮಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಅಂಕಿತಾ,ಸಂತೋಷ ಚಿತಾಪೂರ,ಯಲ್ಲಪ್ಪ ಕೋರಿ,ಮರೆಪ್ಪ ಹಂಚಿನಾಳ,ನಾಗು ಸಗರ,ನೆಹರು ಹಳಿಸಗರ,ದೇವು ದೇವಕೇರಿ,ಸಾಬಣ್ಣ ತಡಬಿಡಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here