ನಾಳೆ ಜ. 31, ಫೆ. ೧ರಂದು ವಿವಿಧ ಬೇಡಿಕೆಗಳಿಗಾಗಿ ಬ್ಯಾಂಕ್ ನೌಕರರಿಂದ ಮುಷ್ಕರ

0
56

ಕಲಬುರಗಿ: ವಿವಿಧ ಬೇಡಿಕೆಗಳಿಗೆ ಅನೇಕ ಬಾರಿ ಕೇಂದ್ರ ಸರಕಾರಕ್ಕೆ ಹಾಗೂ ಆರ್.ಬಿ.ಐಗೆ ಮನವಿ ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿಗೆ ಸರಿಯಾದ ಸ್ಪಂದನೆ ಇಲ್ಲ. ಅದಕ್ಕಾಗಿ ಮೊದಲ ಹಂತವಾಗಿ ನಾಳೆ(ಜ.೩೧) ಹಾಗೂ ಫೆ. ೧ ರಂದು ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲಾಗುವದು ಎಂದು ಸಂಯುಕ್ತ ಬ್ಯಾಂಕ್ ಸಂಘಗಳು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕ್‌ಗಳ ವಿಲಿನದಿಂದಾಗಿ ವೇತನಗಳಲ್ಲಿ ತಾರತಮ್ಯಗಳು ಕಂಡು ಬಂದಿವೆ. ಅನೇಕರಿಗೆ ವೇತನ ಪರಿಷ್ಕರಣೆ ಯಾಗಿಲ್ಲ. ಸದ್ಯದ ಮಾರುಕಟ್ಟೆಯ ಅನುಸಾರವಾಗಿ ಎನ್ನಾ ನೌಕರರ ವೇತನ ಪರಿಷ್ಕರಣೆಯಾಗಬೇಕು. ಕಳೆದ ಎರಡು ವರ್ಷದಿಂದ ಆಗಿಲ್ಲ. ಕೇಂದ್ರ ಸರಕಾರ ಹೆಚ್ಚಳ ಮಾಡುತ್ತೇವೆ ಎಂದು ಕೇವಲ ಭರವಸೆ ಮಾತ್ರ ನೀಡುತ್ತಿದೆ ಎಂದರು.

Contact Your\'s Advertisement; 9902492681

ವಾರದಲ್ಲಿ ೫ ದಿನ ಮಾತ್ರ ಕೆಲಸ, ವಿಶೇಷ ಭತ್ಯೆ ಮತ್ತು ಮೂಲ ವೇತನ ಹೆಚ್ಚಳ, ಹೊಸ ಪಿಂಚಣಿ ರದ್ದತಿ, ಹಿಂದಿನ ಪಿಂಚಣಿ ಮುಂದುವರೆಕೆ, ಸಬ್ಬಂದಿ ಕಲ್ಯಾಣ ನಿಧಿ ವಿಸ್ತರಣೆ, ಊಟದ ಸಮಯ, ವ್ಯವಹಾರದ ಸಮಯದಲ್ಲಿ ಕಾಲಾವಕಾಶ ಸೇರಿದಂತೆ ಅನೇಕ ವಿಷಯಗಳ ಕುರಿತು ಮುಷ್ಕರ ನಡೆಯಲಿದೆ.  ಮೊದಲ ಹಂತವಾಗಿ ಮಷ್ಕರವು ನಾಳೆ ನಡೆಯಲಿದೆ. ಎರಡನೇ ಹಂತವಾಗಿ. ಮಾರ್ಚ ೧೧, ೧೨, ಮತ್ತು ೧೩ ರಂದು ಆದರೂ ಸರಕಾರ ಯಾವುದೇ ಗಮನ ನೀಡದಿದ್ದರೇ. ಎಪ್ರಿಲ್ ೧ ರಂದು ಅನಿರ್ಧೀಷ್ಟಾವಧಿ ಮುಷ್ಕರ ನಡೆಯುತ್ತದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಮಗೆ ಅರ್ಥವಿದೆ. ಆದರೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಅವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೊಷ್ಠಿಯಲ್ಲಿ ಮೊಹ್ಮದ ಖದೀರ, ರವಿಗೌಡ, ನವೀನ ಕಾಗಲಕರ, ಶ್ರೀಧರ, ನಾರಾಯಣ ಗೋಗಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here