ದಂಪತಿಗಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

0
174

ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಬೇವಿನಹಳ್ಳಿಯಲ್ಲಿ ಕುಟುಂಬ ಕಲಹದಿಂದ ಬೇಸತ್ತು ದಂಪತಿಗಳಿಬ್ಬರು ಭಾನುವಾರ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಮೃತ ದಂಪತಿಗಳನ್ನು ಚೌಡಪ್ಪ ( 50) ಹಾಗೂ ಸುವರ್ಣಮ್ಮ (47) ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಇದೇ ಗ್ರಾಮದವರಾಗಿದ್ದ ಕೆಲಸಕ್ಕಾಗಿ ದೊಡ್ಡಬಳ್ಳಾಪುರ ದಲ್ಲಿ ನೆಲೆಸಿದ್ದರು. ಇತ್ತೀಚೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳು ಪ್ರೀತಿಸಿ ಬೇರೆ ಸಮುದಾಯದ ಹುಡುಗರೊಂದಿಗೆ ವಿವಾಹವಾಗಿದ್ದರು.

Contact Your\'s Advertisement; 9902492681

ಈ ವಿಚಾರವನ್ನು ತಿಳಿದ ತಂದೆ ಚೌಡಪ್ಪ ಮತ್ತು ತಾಯಿ ಸುವರ್ಣಮ್ಮ ಹೆಣ್ಣು ಮಕ್ಕಳು ಮಾಡಿದ ಅವಮಾನದಿಂದ ಸಹಿಸಲಾಗದೆ ಸ್ವಗ್ರಾಮವಾದ ಬೇವಿನಹಳ್ಳಿಗೆ ಬಂದು, ಸ್ವಂತ ಜಮೀನಿನಲ್ಲಿ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣರಾಗಿದ್ದಾರೆ ಎನ್ನಲಾಗಿದೆ.

ಪ್ರಕರಣವನ್ನು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here