ಶಾಲಾ ವಿದ್ಯಾರ್ಥಿಗಳಿಂದ ಸಮ್ಮೇಳನಕ್ಕೆ ಆಹಾರ ಸಂಗ್ರಹ

0
36

ಕಲಬುರಗಿ: ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜೇವರ್ಗಿ ತಾಲೂಕಿನ ಜೇರಟಗಿಯ ಅಮೃಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ ಪ್ರೌಢ ಶಾಲಾ ವಿದ್ಯಾರ್ಥಿಗಳು ಸಂಗ್ರಹಿಸಿದ ೩ ಸಾವಿರ ರೊಟ್ಟಿಗಳು, ೧೦ ಕಿಲೋ ಶೇಂಗಾ ಚಟ್ನಿಯನ್ನು ಸಮ್ಮೇಳನದ ಆಹಾರ ಸಮಿತಿಯ ಅಧ್ಯಕ್ಷ-ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ನೀಡಲಾಯಿತು.

ಮುಖ್ಯೋಪಾಧ್ಯಾಯ ಬಸವರಾಜ ಮಲ್ಲಡ, ಗುರುಮೂರ್ತಿ ಹಿರೇಮಠ, ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಶಿಲ್ಪಾ ಜೋಷಿ, ಶಿವಾನಂಧ ಮಠಪತಿ, ಸಮಿತಿಯ ಸದಸ್ಯರಾದ ಜಿಪಂ ಸದಸ್ಯರಾದ ಸಂತೋಷ ಪಾಟೀಲ ದಣ್ಣೂರ, ಸಿದ್ಧರಾಮ ಪ್ಯಾಟಿ, ಮಲ್ಲಿಕಾರ್ಜುನ ಇಂಡಿ, ರಮೇಶ ಬಿರಾದಾರ, ಶಿವಾನಂದ ಶಿರಗೊಂಡ, ಹರಿಶ್ಚಂದ್ರ, ಗುರುನಾಥ, ಪ್ರಭುಲಿಂಗ, ರಾಜೇಶ, ರೇನಾ ಬಾನು ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here