ಜೇವರ್ಗಿ: ಕಾಂಗ್ರೆಸ್ ಮುಖಂಡನಿಗೆ ಕಲ್ಲಿನಿಂದ ಜಜ್ಜಿ ಕೊಲೆ?

0
1094
ಜೇವರ್ಗಿ: ಕಾಂಗ್ರೆಸ್ ಪ್ರಭಾವಿ ಮುಖಂಡ ತಾಲೂಕಿನ ಬೇಲೂರ ಗ್ರಾಮದ ಮಾಂತಪ್ಪ ಕಾಂಬಳೆ (55) ಎಂಬುವರ ಶವ ಅವರ ಸ್ವಂತ ಜಮೀನಿನಲ್ಲಿ ಪತ್ತೆಯಾಗಿದೆ. ಗುರುವಾರ ರಾತ್ರಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಸಂಶಯ ವ್ಶಕ್ತವಾಗಿದೆ.
ಮ್ರತ ಮಾಂತಪ್ಪ ಕಾಂಬಳೆ ಶಾಸಕ ಡಾ. ಅಜಯಸಿಂಗ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಗುರುವಾರ ರಾತ್ರಿ ಮಾಂತಪ್ಪನಿಗೆ ಕರೆ ಮಾಡಿದ ಕೆಲವರು ತಮ್ಮ ಜಮೀನಿನ ಕಡೆ ಬರುವಂತೆ ಕರೆದಿದ್ದಾರೆ. ಅಲ್ಲಿಯೇ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವ ಸಂಶಯ ಗ್ರಾಮಸ್ಥರದ್ದು.
ಮ್ರತರ ಕೈˌ ಕಾಲುˌ ಮುಖ ಹಾಗೂ ದೇಹದ ವಿವಿಧ ಭಾಗಕ್ಕೆ ಗಾಯಗಳಾಗಿವೆ.
ಮ್ರತರಿಗೆ ಪತ್ನಿˌ ಒಬ್ಬ ಮಗˌ ಒಬ್ಬ ಮಗಳಿದ್ದಾಳೆ.
Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here