ರುಕ್ಮಾಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸಲು ಸಿ.ಎನ್.ಭಂಡಾರೆ ಒತ್ತಾಯ

0
129

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಶವಗಳ ಹೂಳಲು ಜಾಗವಿಲ್ಲದೆ ಗ್ರಾಮದ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಅನೇಕ ಬಾರಿ ಮನವಿ ಮಾಡಿದರು ಸರಕಾರ ಗಮನಿಸುತ್ತಿಲ್ಲ.ಕೂಡಲೆ ಗ್ರಾಮಕ್ಕೆ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ರುಕ್ಮಾಪುರ ಗ್ರಾಮ ನಿವಾಸಿಗಳ ಸಂಘದ ಕಾರ್ಯಾಧ್ಯಕ್ಷ ಹಾಗು ನಿವೃತ್ತ ಎಸ್.ಪಿ ಚಂದ್ರಕಾಂತ ಎನ್.ಭಂಡಾರೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಕಂದಾಯ ಸಚಿವರಿಗೆ ಮನವಿ ಮಾಡಿದ್ದು,ಗ್ರಾಮದಲ್ಲಿ ಹಿಂದು ಸಮುದಾಯದ ಜನರ ಶವಗಳನ್ನು ಹೂಳಲು ಜಾಗವಿಲ್ಲದೆ ರಸ್ತೆಯಲ್ಲಿ ಶವವನ್ನು ಹೂಳುವ ಪರಸ್ಥಿತಿ ಇದೆ.ಆದ್ದರಿಂದ ಗ್ರಾಮದ ಸರ್ವೆ ನಂಬರ್ ೮ ರ ಪಕ್ಕದಲ್ಲಿ ೨ ಎಕರೆಯಷ್ಟು ಸರಕಾರಿ ಜಾಗವಿದ್ದು ಅದು ಬೇಚರಕ್ ಗ್ರಾಮಕ್ಕೆ ಬರುತ್ತದೆ.

Contact Your\'s Advertisement; 9902492681

ತಮ್ಮ ಇಲಾಖೆಯ ಅಧಿಕಾರಿಗಳನ್ನು ಈ ಸ್ಥಳಕ್ಕೆ ಭೇಟಿ ಮಾಡಿಸಿ,ಈ ಜಮೀನಲ್ಲಿ ಶವ ಹೂಳಲು ಒಂದು ಎಕರೆ ಮತ್ತು ಶವ ಸುಡಲು ಒಂದು ಎಕರೆ ಮಂಜೂರು ಮಾಡಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here