ಕೊಟ್ಟ ಭರವಸೆ ಈಡೇರಿಸುತ್ತಿದ್ದೇನೆ: ಶಾಸಕ ಗುತ್ತೇದಾರ

0
53

ಆಳಂದ: ತಾವು ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇನೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ತಾಲೂಕಿನ ಗಡಿಗ್ರಾಮ ನಂದಗೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾದ 50 ಲಕ್ಷ ರೂ.ಗಳ ವೆಚ್ಚದ ನಂದಗೂರ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ರಾಜಕೀಯ ಎನ್ನುವುದು ಸಮಾಜ ಸೇವೆಯ ಪ್ರಮುಖ ಕ್ಷೇತ್ರ ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದು ಸಾದ್ಯವಾದಷ್ಟು ಒಳಿತು ಮಾಡುವ ಕಾರ್ಯ ಮಾಡುತ್ತಿದ್ದೇನೆ ಈ ಕಾರ್ಯ ಮಾಡಲು ಜನರು ತಮಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅವರ ಋಣ ಎಂದಿಗೂ ಮರೆಯಲಾಗದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಬಸವರಾಜ ಸಾಲೇಗಾಂವ, ಸಿದ್ದಾರಾಮ ದೇಸಾಯಿ, ಅಶೋಕ ಕೋರೆ, ರಾಜು ಪಾಟೀಲ, ದತ್ತು ಮುರುಮೆ, ಸಂಜೀವನ ಕಾರಭಾರಿ, ಸತೀಶ್ ಪಾಟೀಲ, ವಸಂತ ಪೂಜಾರಿ, ದತ್ತು ಪಾಟೀಲ ಹತ್ತರ್ಗಾ, ಅಧಿಕಾರಿಗಳಾದ ಕರಬಸಪ್ಪ ಜೆಇ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here