ಅನ್ನಕ್ಕಿಂತ ಅಧ್ಯಾತ್ಮಿಕ ಕೊರತೆಯಿಂದ ಬದುಕು ಅಶಾಂತಿಯುತವಾಗಿದೆ: ಡಾ. ನಾಗೇಂದ್ರ ಮಸೂತಿ

0
64

ಕಲಬುರಗಿ: ನಗರದ ಭವಾನಿ ನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೯೦ನೇ ಮಾಲಿಕೆಯಲ್ಲಿ ಮಾತನಾಡುತ್ತಾ ಇಂದು ಸಂತ, ಶರಣರ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಒಳ್ಳೆಯ ಸಮಾಜ ನಿರ್ಮಿಸೋಣ ಶರಣರು ಆಚಾರ ವಿಚಾರದಿಂದ ಪ್ರಚಾರ ಪಡೆದು ಮಹಾಮಾನವರಾಗಿದ್ದಾರೆ. ಇಂದಿನ ಮಕ್ಕಳಿಗೆ ಅವರನ್ನೆ ಆದರ್ಶ ವ್ಯಕ್ತಿಗಳೆಂದು ಹೇಳುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು. ಶರಣರು ಕಾಯಕವೇ ಕೈಲಾಸವೆಂದು ದುಡಿದು ಕಾಯಕದಲ್ಲಿ ದೇವರನ್ನು ಕಂಡವರು ಅಂತಹ ಮಹಾಪುರುಷರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಅವರಾದ ಶ್ರೀಗಳಾದ ಷ.ಬ್ರ. ಮರುಳಸಿದ್ಧ ಶಿವಾಚಾರ್ಯರು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗಣೇಶ ಕೊ. ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶಾಂತಕುಮಾರ ಬಿ. ಬಿಲಗುಂದಿ, ಉಪಾಧ್ಯಕ್ಷರಾದ ಶ್ರೀಮತಿ ಸೋನಾಬಾಯಿ ಜೆ. ಕೋಣಿನ, ನಿರ್ದೇಶಕರಾದ ಜಗನ್ನಾಥ ಡಿ. ಅಣಕಲ, ಶ್ರೀಮತಿ ಬಿಂದು ಕೆ. ಶಹಾ, ವಿನಯಕುಮಾರ ಶಹಾ, ಶಿವರಾಜ ಬಿ. ಖುಬಾ, ರವೀಂದ್ರಕುಮಾರ ಸಿ. ಐನಾಪುರ, ರವಿಕುಮಾರ ಸರಸಂಬಿ ಇವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಸಂಗಮೇಶ ಹೂಗಾರ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರ ನಿರೂಸಿದರು, ಉಪನ್ಯಾಸಕ ಪ್ರಕಾಶ ರೋಳೆ ವಂದಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಜಗನ್ನಾಥ ಸಜ್ಜನಶೆಟ್ಟಿ, ಮಹಾಂತೇಶ ಪಾಟೀಲ, ಗುರುರಾಜ ಹೂಗಾರ, ಶಿವಕುಮಾರ ಗಣಜಲಖೇಡ, ಅಮರಾವತಿ ಹೂಗಾರ, ಕವಿತಾ ದೇಗಾಂವ, ಗುರುಲಿಂಗಪ್ಪ ಕಲಶೆಟ್ಟಿ, ಶಾಂತಕುಮಾರ ಧುತ್ತರಗಿ, ರಾಮಚಂದ್ರ ಪಾಂಚಾಳ, ವೀರಣ್ಣಾ ಸ್ವಾಧಿ, ಶಿವಲಿಂಗಪ್ಪಾ ಕನ್ನಡಗಿ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here