ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಸಾಧನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿ: ಸಾಬಿಹಾ ಭೂಮಿಗೌಡಾ

0
65

ಕಲಬುರಗಿ: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕೊಡುಗೆ, ತ್ಯಾಗ, ಇತಿಹಾಸ ಮತ್ತು ಅವರ ಕಾರ್ಯನಿಷ್ಠೆಯನ್ನು ಉನ್ನತ ಶಿಕ್ಷಣ ಕೇಂದ್ರಗಳ ಹಾಗೂ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರ್ಪಡೆಗೊಳ್ಳಬೇಕು. ಈ ಬಗ್ಗೆ ಪಠ್ಯಪುಸ್ತಕಗಳನ್ನು ಮೌಲ್ಯಮಾಪನಗೊಳಿಸಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಾಬಿಹಾ ಭೂಮಿಗೌಡಾ ಅಭಿಪ್ರಾಯಪಟ್ಟರು.

ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ’ಮಹಿಳೆ ಮತ್ತು ವಿಜ್ಞಾನ’ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದಲ್ಲಿಯ ಅಭಿವೃದ್ಧಿಗೆ ಕಾರಣರಾದ ಮಹಿಳೆಯರ ಕೊಡುಗೆಗಳನ್ನು ಹಾಗೂ ಹೆಸರುಗಳನ್ನು ನಿರ್ಬಂಧಿಸುವ ಮೂಲಕ ಮಹಿಳಾ ವಿಜ್ಞಾನಿಗಳಿಗೆ ಅನ್ಯಾಯವೆಸಗಲಾಗಿದೆ ಎಂದು ಆಂತಕ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪುರುಷ ಪ್ರಧಾನ ಸಮಾಜದಲ್ಲಿ ಪುರುಷ ವಿಜ್ಞಾನಿ ಸಾಧನೆಯ ಬಗ್ಗೆ ವಿಜ್ಞಾನದ ಇತಿಹಾಸದ ಪ್ರತಿ ಪುಟಗಳಲ್ಲಿ ವಿವರಿಸಲಾಗಿದೆ. ಆದರೆ ಮಹಿಳಾ ವಿಜ್ಞಾನಿ ಹಾಗೂ ಸಾಧಕರ ಬಗ್ಗೆ ಉಲ್ಲೇಖಗೊಂಡಿರುವುದು ಅತೀ ವಿರಳವಾಗಿದೆ. ಮಹಿಳೆಯರಿಗೆ ವೈಜ್ಞಾನಿಕ ಕಲಿಕೆಯ ಹಸಿವಿನ ದಾಹ ತೀರಿಸಿಕೊಳ್ಳಲು ಅಂದು ಮಹಿಳೆಯರಿಗೆ ಪುರುಷರಂತೆ ಅವಕಾಶವಿರಲಿಲ್ಲ. ಪುರುಷರಂತೆ ವಿಜ್ಞಾನದ ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ತಮ್ಮನ್ನು ತಾವು ಮರೆಮಾಚಿ ಕಲಿಕೆಯ ಬದುಕು ಸಾಗಿಸುತ್ತಿದ್ದರು ಎಂದರು.

ಪ್ರೊ.ಭೂಮಿಗೌಡಾ ಮಾತುಗಳನ್ನು ಮುಂದುವರೆಸುತ್ತಾ, ಇತಿಹಾಸ ಪುಟ ಹಾಗೂ ಪಠ್ಯ ಪುಸ್ತಕಗಳಲ್ಲಿ ಕಂಡು ಬರುತ್ತಿರುವ ಲಿಂಗ ತಾರತಮ್ಯ ತಡೆಗಟ್ಟಬೇಕಾಗಿದೆ. ಯುವ ವಿಜ್ಞಾನಿಗಳು/ ವಿಜ್ಞಾನದ ವಿದ್ಯಾರ್ಥಿಗಳು ಹಿಂದಿನ ಮಹಿಳಾ ವಿಜ್ಞಾನಿಗಳ ಹೋರಾಟಗಳ ಫಲದಿಂದ ಇಂದು ಕಲಿಕೆಗೆ ಪ್ರೋತ್ಸಾಹ ಸಿಕ್ಕಿದೆ, ಹೀಗಾಗಿ ವಿದ್ಯಾರ್ಥಿನಿಯರು ತಮ್ಮ ಕಲಿಕೆಯಲ್ಲಿ ಛಾಪು ಮೂಡಿಸುವುದಕ್ಕೆ ಪ್ರೇರಣೆಯಾಗಿದೆ ಎಂದರು. ಇಂದು ಬಾಲಕಿಯರು ತಮ್ಮ ಶಿಕ್ಷಣದ ಅವಧಿಯಲ್ಲಿ ಯಾವುದೇ ಸವಾಲು ಎದುರಿಸುತ್ತಿಲ್ಲ. ಹಿಂದಿನ ಕಾಲದಲ್ಲಿ ಮಹಿಳಾ ವಿಜ್ಞಾನಿಗಳು ಸಾಧನೆ, ತ್ಯಾಗ ಮತ್ತು ಸಮಸ್ಯೆಗಳನ್ನು ಒಮ್ಮೆ ಯೋಚಿಸಿದರೆ, ಪ್ರಸ್ತುತ ದಿನದಲ್ಲಿಯ ಯಾವುದೇ ಸಮಸ್ಯೆಗಳು ದೊಡ್ಡದೆನಿಸುವುದಿಲ್ಲ ಎಂದರು.

ವಿವಿ ಕುಲಪತಿ ಡಾ. ನಿರಂಜನ್ ವಿ ನಿಷ್ಠಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವಿಶ್ವದಾದ್ಯಂತ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆಯನ್ನು ಮೂಡಿಸಿದ್ದಾರೆ. ಚೀನಾದ ಒಟ್ಟು ಮಹಿಳೆಯರಲ್ಲಿ ಪ್ರತಿಶತ ೮೫ರಷ್ಟು ಮಹಿಳೆಯರು ಉದ್ಯೋಗಿಗಳಾಗಿದ್ದಾರೆ. ಅಮೇರಿಕಾದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಪ್ರತಿಶತ ೩೫ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಮೇಡಮ್ ಕ್ಯೂರಿ ಮಾಡಿದ ಕೊಡುಗೆಯನ್ನು ಸ್ಮರಿಸಿಕೊಂಡರು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಮಹಿಳೆಯಾಗಿದ್ದಾಳೆ. ಅವರು ವಿಜ್ಞಾನ ಕೇತ್ರಕ್ಕಾಗಿಯೇ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸೂಪರ್ ಕಂಪ್ಯೂಟರದಿಂದ ’ವ್ಯಾಟ್ಸ್‌ನ್’ ರೋಗಿಯ ಸಂಪೂರ್ಣ ಮಾಹಿತಿಯನ್ನು ಪಡೆದ ನಂತರ ಔಷಧಿಗಳನ್ನು ಸೂಚಿಸಲಾಗುತ್ತದೆ. ಒಬ್ಬ ವೈದ್ಯ ಮಾಡಬೇಕಾದ ಎಲ್ಲಾ ಕರ್ತವ್ಯಗಳನ್ನು ಇಂದು ಕಂಪ್ಯೂಟರ ಮಾಡುತ್ತಿದೆ. ಇಂದು ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ರಾಂತಿಯತ್ತ ಸಾಗುತ್ತಿದೆ. ಭವಿಷ್ಯದಲ್ಲಿ ಭಾವನಾತ್ಮಕ ಬುದ್ದಿಮತ್ತೆಯ ಅವಶ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿವಿ ಸಮಕುಲಪತಿ ಡಾ. ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಡಾ. ಲಕ್ಷ್ಮಿ ಮಾಕಾ, ಪ್ರೊ. ನೀಲಾಂಬಿಕಾ ಶೇರಿಕಾರ, ಪ್ರೊ.ಎಸ್.ಜಿ.ಡೊಳ್ಳೆಗೌಡರ್, ಪ್ರೊ.ರಾಮಕೃಷ್ಣ ರೆಡ್ಡಿ ಉಪಸ್ಥಿತರಿದ್ದರು. ಪ್ರೊ.ನಾಗಬಸವಣ್ಣ ಗುರಗೋಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here