ವೀರಶೈವ ಲಿಂಗಾಯತ ವಧು-ವರರ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭ

0
89

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಹಾಗೂ ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ದಿವ್ಯ ಸಾನ್ನಿಧ್ಯದಲ್ಲಿ ನಗರದ ಜಿಲ್ಲಾ ವೀರಶೈವ ಸಮಾಜ ಕಲ್ಯಾಣ ಮಂಟಪ (ಸಾರ್ವಜನಿಕ ಉದ್ಯಾನವನ)ದಲ್ಲಿ ಮಾರ್ಚ ೧ ರಂದು ಸಂಜೆ ೬ ಗಂಟೆಗೆ ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್ ವತಿಯಿಂದ ವೀರಶೈವ ಲಿಂಗಾಯತ ವಧು-ವರರ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಜಿಲ್ಲಾ ವೀರಶೈವ ಸಮಾಜ ಕಲ್ಯಾಣ ಮಂಟಪ ಟ್ರಸ್ಟ ಅಧ್ಯಕ್ಷರಾದ ಬಸವರಾಜ ದೇಶಮುಖ ತಿಳಿಸಿದ್ದಾರೆ.

ಈ ಉದ್ಘಾಟನಾ ಸಮಾರಂಭದಲ್ಲಿ ಸಾರಂಗಮಠ ಶ್ರೀಶೈಲ ಮತ್ತು ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಚೌಡಾಪುರಿ ಹಿರೇಮಠದ ಷ.ಬ್ರ.ರಾಜಶೇಖರ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಧು-ವರರ ಮಾಹಿತಿ ಕೇಂದ್ರದ ಕಾರ್ಯದರ್ಶಿ ಗಣೇಶ ಅಣಕಲ್ ಗೌರವ ಉಪಸ್ಥಿತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Contact Your\'s Advertisement; 9902492681

ಸಲಹಾ ಸಮಿತಿಯ ಸದಸ್ಯರಾದ ಅರುಣಕುಮಾರ ಎಸ್.ಪಾಟೀಲ, ಚನ್ನವೀರಪ್ಪ ಗುಡ್ಡಾ, ಶರಣಕುಮಾರ ಎಂ. ಮೋದಿ, ಕಲ್ಯಾಣಪ್ಪ ಪಾಟೀಲ, ರಮೇಶ ಜಿ. ತಿಪ್ಪನೂರ, ಸುರೇಶಕುಮಾರ ನಂದಗಾಂವ ಭಾಗವಹಿಸಲಿದ್ದಾರೆ.
ಕಲಬುರಗಿ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷರುಗಳಾದ ಅಫಜಲಪೂರ -ಚಂದ್ರಶೇಖರ ಕರ್ಜಗಿ, ಆಳಂದ- ಡಾ. ಶಿವಾನಂದ ಬೇಡಗೆ, ಜೇವರ್ಗಿ- ಶರಣಬಸಪ್ಪ ಕಲ್ಲಾ, ಸೇಡಂ- ಚಂದ್ರಶೆಟ್ಟಿ ಬಂಗಾರ, ಚಿಂಚೋಳಿ- ಚಿತ್ರಶೇಖರ ಪಾಟೀಲ, ಚಿತ್ತಾಪೂರ- ಶಿವರಾಯ ಪಾಟೀಲ ಬೆಳಗುಂಪಾ, ಕಲಬುರಗಿ- ಶಾಂತಪ್ಪ ಪಟ್ಟಣಕರ್ ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here