ಮಾತಾ ಮಾಣಿಕೇಶ್ವರಿಯ ಅಂತಿಮ ದರ್ಶನ ಪಡೆದ ಶಾಸಕ ಪ್ರಿಯಾಂಕ್ ಖರ್ಗೆ

0
43

ಕಲಬುರಗಿ: ಜಿಲ್ಲೆಯ ಗುರುಮಿಠಕಲ್ ಯಾನಾಗುಂದಿಯಲ್ಲಿ ನಿನ್ನೆ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಅಮ್ಮನವರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ಅಂತಿಮ ನಮನ ಸಲ್ಲಿಸಿದರು.

ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು ಮಾತಾಜಿ ಅವರ ತತ್ವ ಹಾಗೂ ಅಹಿಂಸಾಪರ ನಿಲುವು ಆದರ್ಶವಾಗಿದೆ. ತಮ್ಮ ವೈಯಕ್ತಿಕ ಬದುಕನ್ನು ತೊರೆದು ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಾತಾಜಿ ಅವರನ್ನು ಕಳೆದುಕೊಂಡ ನೋವು ಎಲ್ಲರನ್ನು ಕಾಡುತ್ತದೆ.

Contact Your\'s Advertisement; 9902492681

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಭವಿಷ್ಯ ರೂಪಿಸಿದ ಗುರುಮಠಕಲ್ ನಲ್ಲಿ ಇರುವಾಗ ಯಾನಾಗುಂದಿಗೆ ಆಗಾಗ ಭೇಟಿ ಕೊಟ್ಟು ಮಾತಾಜೀ ಅವರ ಆಶೀರ್ವಾದ ತೆಗೆದುಕೊಳ್ಳುತ್ತಿರುವ ಬಗ್ಗೆ ನೆನೆದರು. ಮಾತೆ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಿ ಅವರ ಪರಂಪರೆಯ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here