ನಡೆದಾಡುವ ದೇವತೆ ಮಾತಾ ಮಾಣಿಕೇಶ್ವರಿ ಶಿವೈಕ್ಯ: ಅಂಬಾರಾಯ ಅಷ್ಠಗಿ ಕಂಬನಿ

0
77

ಕಲಬುರಗಿ: ಕಲ್ಯಾಣ ಕರ್ನಾಟಕದ ನಡೆದಾಡುವ ದೇವರೆಂದೆ ಪ್ರಸಿದ್ಧರಾಗಿದ್ದ, ಯಾನಾಗುಂದಿಯಲ್ಲಿ ನೆಲೆಸಿ ಕೋಟ್ಯಾಂತರ ಭಕ್ತರ ಪಾಲಿಗೆ ದೈವ ಸ್ವರೂಪಿಯಾಗಿದ್ದ ಮಾತೆ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ದುಃಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿಯವರು ಕಂಬನಿ ಮಿಡಿದಿದ್ದಾರೆ.

“ದಯವಿರಬೇಕು ಸಕಲ ಪ್ರಾಣಿಗಳಲ್ಲಿ” ಎಂಬ ಬಸವಣ್ಣನವರ ತತ್ವವನ್ನು ಇಂದಿನ ಪೀಳಿಗೆಯವರಿಗೂ ಭೋದಿಸಿ, ಅದೇ ಮಾರ್ಗದಲ್ಲಿ ತಮ್ಮ ಇಡೀ ಜೀವನವನ್ನು ಸಾಗಿಸಿದ್ದರು. “ನುಡಿದಂತೆ ನಡೆ ಈ ಜನ್ಮ ಒಂದೇ ಕಡೆ” ಎಂಬ ತಮ್ಮ ಅಮೃತ ವಾಣಿಯಿಂದ ಭಕ್ತವೃಂದವನ್ನು ಸನ್ಮಾರ್ಗದೆಡೆಗೆ ನಡೆಸಿದ್ದರು.

Contact Your\'s Advertisement; 9902492681

ಜನರನ್ನು ಮದ್ಯಪಾನ ಹಾಗೂ ಇನ್ನಿತರ ದುಶ್ಚಟಗಳನ್ನು ಮೆಟ್ಚಿ ನಿಲ್ಲುವಂತೆ ಮಾಡಿ, ಅವರನ್ನು ಭಕ್ತಿಮಾರ್ಗದೆಡೆ ಕೊಂಡೊಯ್ಯಲು ಅವಿರತವಾಗಿ ಶ್ರಮಿಸಿದ್ದರು. ಆ ಭಗವಂತನಲ್ಲಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಅವರ ಕೃಪಾಶಿರ್ವಾದ ಸದಾಕಾಲ ಎಲ್ಲರ ಮೇಲಿರಲೇಂದು ಅಂಬಾರಾಯ ಅಷ್ಠಗಿ ಆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here