ಮಾರ್ಚ15 ರಂದು ಡಿ.ಜಿ.ಬಳೂರಗಿಯವರ ಕೃತಿಗಳ ಲೋಕಾರ್ಪಣೆ

0
30

ಕಲಬುರಗಿ: ಹಿರಿಯ ಸಾಹಿತಿ, ಲೇಖಕ ದೊಡ್ಡಬಸಪ್ಪ ಬಳೂರಗಿ ಅವರು ರಚಿಸಿರುವ ಜೀವನ ನೀತಿ ಮತ್ತು ವಚನ ಸುಮ ಎಂಬ ಎರಡು ಕೃತಿಗಳು ಲೋಕಾರ್ಪಣೆಯನ್ನು ಇದೇ ತಿಂಗಳು ಮಾರ್ಚ ೧೫ ರಂದು ಭಾನುವಾರ ಬೆಳಿಗ್ಗೆ ೧೦:೩೦ಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ.ಸಾ.ಪ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಅವರು ಪ್ರಕಟಣೆಗೆ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಖ್ಯಾತ ವೈದ್ಯರಾದ ಡಾ. ಎಸ್.ಎರ್.ಸಿಣ್ಣೂರು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರು, ಕೃತಿ ಬಿಡುಗಡೆ ಮಾಡಲಿದ್ದಾರೆ. ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಕೃತಿಗಳ ಕುರಿತು ಮಾತನಾಡಲಿದ್ದಾರೆ ಹಾಗೂ ಬಸವರಾಜ ಹಿರೇಮಠ, ಸಾಹಿತಿ ಹಾಗೂ ಸಂಶೋಧಕರಾದ ಡಾ.ಮೋನಪ್ಪ ಶಿರವಾಳ ಪ್ರಗತಿಪರ ಚಿಂತಕರಾದ ನೀಲಕಂಠ ಬಡಿಗೇರ, ಡಾ. ರಮೇಶ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಸಾಹಿತ್ಯಾಸಕ್ತರು, ಸಾಹಿತ್ಯಾಭಿಮಾನಿಗಳು ಹಾಗೂ ಡಿ.ಜಿ.ಬಳೂರಗಿಯವರ ಶಿಷ್ಯಂದಿರ ಬಳಗ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹಾಗೂ ಪಂಚಾಕ್ಷರಿ ಹಿರೇಮಠ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here