ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜನ ಜಾಗೃತಿ

0
82

ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ನಗರಸಭೆ, ತಾಲೂಕಾಢಳಿತ ಹಾಗೂ ಆರೋಗ್ಯ ಇಲಾಖೆ ವ್ಯಾಪಕ ಪ್ರಚಾರ ಕೈಗೊಳ್ಳುತ್ತಿದೆ.

ನಗರಸಭೆಯವರು ಈಗಾಗಲೇ ಆಟೋ ವಾಹನಗಳ ಮೂಲಕ ಧ್ವನಿವರ್ಧಕಗಳನ್ನು ಬಳಸಿಕೊಂಡು ನಗರದ ಎಲ್ಲಾ ವಾರ್ಡಗಳ ಬೀದಿ-ಗಲ್ಲಿಗಲ್ಲಿಗಳಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಪ್ರತಿ ಮುಖ್ಯ ಬೀದಿಗಳಲ್ಲಿ ಹಾಗೂ ಜನಬೀಡಾದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಮತ್ತು ಮುಂಜಾಗೃತ ಕ್ರಮಗಳ ಬಗ್ಗೆ ಬ್ಯಾನರ್ ಮತ್ತು ಕಟೌಟ್‍ಗಳನ್ನು ಕಟ್ಟಲಾಗಿದೆ.

Contact Your\'s Advertisement; 9902492681

ಕರೊನಾ ವೈರಸ್ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ,ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.ಮುಂಜಾಗೃತ ಕ್ರಮವಾಗಿ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಅಡ್ಡ ಹಿಡಿಯಬೇಕು. ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಕೈಗಳನ್ನು ಸಾಬೂನಿನಿಂದ , ಸ್ಯಾನಿಟೈಜರ್ ದ್ರವದಿಂದ ತೊಳೆದುಕೊಳ್ಳಬೇಕು.ಆದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು.ರೋಗದ ಲಕ್ಷಣ ಹೊಂದಿರುವವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. “ಕೊರೊನಾ ವೈರಸ್ ಬಗ್ಗೆ ಭಯಬೇಡ; ಎಚ್ಚರವಿರಲಿ” ರಂಬ ಸ್ಲೋಗನ್‍ನೊಂದಿಗೆ ಜನಜಾಗೃತಿ ಮೂಡಿಸಲು ಕ್ರಮಕೈಗೊಂಡಿದ್ದಾರೆ.

ಆರೋಗ್ಯ ಇಲಾಖೆಯವರು ಆರೋಗ್ಯ ಸಹಾಯಕರನ್ನು, ಆಶಾ ಕಾರ್ಯಕರ್ತರನ್ನು ಬಳಸಿಕೊಂಡು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ.ಅಲ್ಲದೇ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಯಾರಾದರೂ ರಜೆ ಅಥವಾ ಇತರೆ ಉದ್ದೇಶಕ್ಕೆಂದು ಊರಿಗೆ ಬಂದಿದ್ದಲ್ಲಿ ಅಂತಹವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅಂತಹ ವ್ಯಕ್ತಿ ಯಾರಾದರೂ ಕಂಡು ಬಂದರೆ ಆಯಾ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆ ಅಥವಾ ತಹಸೀಲ್ದಾರ ಅವರಿಗೆ ಮಾಹಿತಿ ತೀಲಿಬೇಕೆಂದು ಸಾರ್ವಜನಿಕರಿಗೆ ಕೋರಲಾಗುತ್ತಿದೆ.

ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರ ಸಹಕಾರದೊಂದಿಗೆ ವಿವಿಧ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ.ಅಲ್ಲದೇ ಸಾರ್ವಜನಿಕ ಸ್ಥಳಗಳಾದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬಾರ್, ವೈನ್‍ಶಾಪ್, ಹೊಟೇಲ್‍ಗಳ ಮಾಲೀಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಸಾರ್ವಜನಿಕರು ಭಯಪಡದೇ ಕೊರೊನಾ ಹರಡದಂತೆ ಮುಂಜಾಗೃತ ವಹಿಸುವುದು ಅವಶ್ಯಕ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ಜಾಗೃತಿ ಸಭೆ ನಾಳೆ: ಮಾರ್ಚ 15ರಂದುಬೆಳಿಗ್ಗೆ 11ಗಂಟೆಗೆ ನಗರದ ಪೊಲೀಸ್ ಠಾಣೆಯಲ್ಲಿ ಆರೋಗ್ಯ ಇಲಾಖೆ,ಕಂದಾಯ ಇಲಾಖೆ, ನಗರಸಭೆ ಸಿಬ್ಬಂದಿ, ಬಾರ್, ವೈನ್‍ಶಾಪ್,ಲಾಡ್ಜ್, ಅಡತ್-ದಾಲಮಿಲ್ ಹಾಗೂ ಹೊಟೇಲ್ ಮಾಲೀಕರಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗೃತವಾಗಿ ಜಾಗೃತಿ ಸಭೆ ಆಯೋಜಿಸಲಾಗಿದೆ. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ಸುಳ್ಳು ವದಂತಿಗೆ ಕಿಗೊಡಬೇಡಿ: ನಗರದ ನೆಮ್ಮದಿ ಕೇಂದ್ರದ ಪಕ್ಕದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಮುಂಬಯಿ ಹೋಗಿ ಬಂದಾಗಿನಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಅವನಿಗೆ ಕೊರೊನಾ ಇರಬಹುದೆಂದು ಸ್ಥಳೀಯ ನಿವಾಸಿಯೊಬ್ಬರು ಆರೋಗ್ಯ ಇಲಾಖೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.ಆ ಸಂಬಂಧ ಆರೋಗ್ಯ ಇಲಾಖೆಯವರು ಮನೆಗೆ ಬೇಟಿ ನೀಡಿದ್ದಾರೆ.ಅಂತಹ ಯಾವುದೇ ಲಕ್ಷಣಗಳು ಇಲ್ಲ. ಅಲ್ಲದೇ ಅವರು ಕಲಬುರಗಿಗೆ ಹೋಗಿ ತಪಾಸಣೆಗೆ ಒಳಗಾಗಿದ್ದಾರೆ.ಇಂತಹ ಯಾವುದೇ ಲಕ್ಷಣಗಳು ಇಲ್ಲ ಎಂದು ಹೇಳಿದ್ದಾರೆ. ಸುಮ್ಮನೆ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ.ಈ ಬಗ್ಗೆ ಸಾರ್ವಜನಿಕರು ಕಿವಿಗೊಡದೇ, ರೋಗಬಾರದಂತೆ ಮಾಸ್ಕ್ ಧರಿಸಿಕೊಳ್ಳಿ ಹಾಗೂ ಕೈಗಳನ್ನು ತೊಳೆದುಕೊಳ್ಳುವುದೇ ಉತ್ತಮ ಮಾರ್ಗ. – ಸುರೇಶ ಮೇಕಿನ್ ತಾಲೂಕಾ ಆರೋಗ್ಯ ಅಧಿಕಾರಿ ಚಿತ್ತಾಪೂರ.

ಏನು ಮಾಡಬಾರದು ಸಾಧ್ಯವಾದಷ್ಟು ಜನಸಂದಣಿ ಸೇರುವ ಜಾತ್ರೆ,ಮದುವೆ, ಮಾಲ್‍ಗಳಿಂದ ದೂರವಿರಬೇಕು. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಬೇಕು.ಆಗಾಗೆ ಕೈ ತೊಳೆದುಕೊಳ್ಳಬೇಕು. ಮುಖ,ಮೂಗು,ಕಣ್ಣು,ಬಾಯಿ ಮುಟ್ಟಬಾರದು, ಕೆಮ್ಮುವಾಗ,ಸೀನುವಾಗ ಕರವಸ್ತ್ರ ಬಳಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಸೊಂಕು ತಗುಲಿದ ವ್ಯಕ್ತಿಗಳಿಂದ ದೂರವಿರಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here