ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ರದ್ದು.

0
163

ಚಿತ್ತಾಪುರ: ತಾಲೂಕಿನ ಸಮೀಪದ ಅಳ್ಳೋಳ್ಳಿ ಗ್ರಾಮದ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಶ್ರೀ ಸಾವಿರ ದೇವರ ಸಂಸ್ಥಾನ ಮಠದ ಶ್ರೀ ಪರಮ ಪೂಜ್ಯ ಸಂಗಮನಾಥ ಸ್ವಾಮಿಗಳು ತಿಳಿಸಿದ್ದಾರೆ.

ವಿಶ್ವದಾದ್ಯಂತ ಕೊರೊನ್ ವೈರಸ್ ಹಾವಳಿ ವ್ಯಾಪಿಸಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ
ಏಪ್ರಿಲ್ 4 ರಂದು ನಡೆಯಬೇಕಿದ್ದ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಭವ್ಯ ರಥೋತ್ಸವ ಹಾಗೂ 4ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಾಗೂ ಎಪ್ರಿಲ್ 5ರಂದು ನಡೆಯಬೇಕಿದ್ದ ಕೈ ಕುಸ್ತಿ ಪಂದ್ಯಾವಳಿಯ ಕೂಡ ರದ್ದು ಮಾಡಲಾಗಿದೆ, ಭಕ್ತರು ಸಹಕರಿಸಿ ಹಾಗೂ ಮನೆಯಲ್ಲಿ ಧಾರ್ಮಿಕ ಆಚರಣೆಯನ್ನು ಮಾಡಬೇಕಾಗಿ ಶ್ರೀಮಠ ವಿನಂತಿಸಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಬಾರದೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here