ರುಕ್ಮಾಪುರ ಗ್ರಾಮದ ಬಡ ಕುಟುಂಬಗಳಿಗೆ ಟೀಂ ರಾಜುಗೌಡ ಸೇವಾ ಸಮಿತಿ ನೆರವು

0
72

ಸುರಪುರ: ಈಗಾಗಲೆ ಭಾರತ ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಿತ್ಯವು ನಗರದಲ್ಲಿನ ಬಡವರು ನಿರ್ಗತಿಕರು ಮತ್ತು ವಲಸಿಗರಿಗೆ ಕೊರೊನಾ ನಿರ್ಮೂಲನೆಗೆ ಶ್ರಮಿಸುವ ವಿವಿಧ ಇಲಾಖೆಗಳ ಕೆಲಸಗಾರರಿಗೆ ನಿತ್ಯವು ಅನ್ನ ನೀರು ವಿತರಿಸುವ ಕೆಲಸ ಮುಂದುವರೆಸಿರುವ ಬೆನ್ನಲ್ಲೆ ಈಗ ರುಕ್ಮಾಪುರ ಗ್ರಾಮದಲ್ಲಿನ ಕೆಲ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.

ಗ್ರಾಮದಲ್ಲಿರು ಕೆಲ ಬಡ ಕುಟುಂಬಗಳು ನಿತ್ಯವು ದುಡಿದು ಬಂದ ಹಣದಲ್ಲಿ ಜೀವನ ಸಾಗಿಸಬೇಕಾದಂತ ಕಷ್ಟದ ಬದುಕಿನಲ್ಲಿರುವ ಕುಟುಂಬವನ್ನು ಗುರುತಿಸಿದ ಟೀಂ ರಾಜುಗೌಡ ಸೇವಾ ಸಮಿತಿ,ಆ ಕುಟುಂಬಗಳಿಗೆ ಅಕ್ಕಿ ಬೇಳೆ ಸೇರಿದಂತೆ ವಿವಿಧ ದಿನಸಿ ಪದಾರ್ಥಗಳ ಕಿಟ್ ವಿತರಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ರಾಜುಗೌಡರ ಅಭಿಮಾನಿಗಳಾದ ಸಂತೋಷ ಕುಂಬಾರ ಮತ್ತು ವಿರೇಶ ಕುಂಬಾರ ಇವರುಕೂಡ ತಮ್ಮ ಸ್ವಂತ ಹಣದಲ್ಲಿ ಬಡ ಕುಟುಂಬಗಳಿಗೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಗಂಗಾಧರ ನಾಯಕ,ಶರಣು ನಾಯಕ, ಪರಶುರಾಮ ನಾಟೆಕಾರ,ಸುರೇಶ ಚೆಟ್ಟಿ,ಆನಂದ ರಡ್ಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here