ಡಿ.ಸಿ ಶರತ್ ವರ್ಗಾವಣೆ ತಡೆ: ಸಂಸದ ಜಾಧವ್

0
301

ಕಲಬುರಗಿ: ಜಿಲ್ಲೆಯ ನೆಚ್ಚಿನ ಜಿಲ್ಲಾಧಿಕಾರಿ ಶರತ್ ಬಿ ವರ್ಗಾವಣೆ ಆದೇಶದ ವಿರುದ್ಧ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರು ವರ್ಗಾವಣೆ ಆದೇಶ ತಡೆಯಲಾಗಿದೆ ಎಂದು ಕಲಬುರಗಿ ಜನತೆಗೆ ಸಂದೇಶ ನೀಡಿದ್ದಾರೆ.

ಡಿ.ಸಿ ವರ್ಗಾವಣೆ ಸುದ್ದಿ ತಿಳಿದ ತಕ್ಷಣ ಮಾಲೀಕಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ಸಂಸದ ಜಾಧವ್ ಅವರಿಗೆ ಭೇಟಿ ನೀಡಿ ಆದೇಶ ವಾಪಸ್ ಪಡೆಯುದಾಗಿ ಸರಕಾರದ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ತಿಳಿಸಿರುವುದಾಗಿ ಅವರು ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಶರತ್ ಬಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇಂತಹ ಅಧಿಕಾರಿಗಳ ಅಗತ್ಯ ಕಲಬುರಗಿಗೆ ಇದೆ. ಆದರಿಂದ ಅವರ ವರ್ಗಾವಣೆ ತಡೆಯಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here