ಕಲಬುರಗಿ: ಕನ್ನಡದ ಹಿರಿಯ ಕವಿ ನಿಸಾರ್ ಅಹ್ಮದ್ ಇನ್ನಿಲ್ಲ ಅನ್ನುವದು ಕೇಳಿ ತುಂಬಾ ಬೇಸರಾಯಿತು ಎಂದು ವೈದ್ಯ ಸಾಹಿತಿ ಡಾ. ಎಸ್.ಎಸ್. ಪಾಟೀಲ ಸಂತಾಪ ತಿಳಿಸಿದ್ದಾರೆ.
ಈ ಹಿಂದೆ ಅವರನ್ನು ಬೆಂಗಳೂರಿನಲ್ಲಿ ಕಂಡು ಮಾತಾಡಿಸಿ, ನನ್ನ ಹೊಸ ಕವನ ಸಂಕಲನ ಬಿಡುಗಡೆ ಮಾಡುವಂತೆ ವಿನಂತಿಸಿಕೊಂಡಿದ್ದೆ. ಕಲಬುರಗಿಯಲ್ಲಿ ಬಿಸಿಲು ಹೆಚ್ಚಾಗಿರುತ್ತೆ. ನಂತರ ಬರುವೆ ಎಂದು ಭರವಸೆ ನೀಡಿದ್ದರು.
ಕವಿಯ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬಡವಾಯಿತು.ನವ್ಯ ಶೈಲಿಯ ,ನವೋದಯದ ಆಶಯದ ದೊಡ್ಡ ಕವಿ ಅವರಾಗಿದ್ದರು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.