ಕೆ.ಎಸ್.ನಿಸಾರ್ ಅಹಮದ್‍ರಿಗೆ ಕರ್ನಾಟಕ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

0
17

ಸುರಪುರ: ಕನ್ನಡದ ಮೇರು ಸಾಹಿತಿಗಳಲ್ಲೊಬ್ಬರಾದ ಪದ್ಮಶ್ರಿ ಪ್ರಶಸ್ತಿ ಪುರಸ್ಕøತ ಸಾಹಿತಿ ಕೆ.ಎಸ್.ನಿಸಾರ್ ಅಹಮದ್ ಅವರ ನಿಧನ ನಾಡಿನ ಸಾರಸ್ವತ ಲೋಕಕ್ಕೆ ಉಂಟಾದ ದೊಡ್ಡ ನಷ್ಟ ಎಂದು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.

ನಗರದ ಕೆಜೆಯು ತಾಲೂಕು ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ,ನಿತ್ಯೋತ್ಸವದ ಮೂಲಕ ಇಡೀ ನಾಡೆ ಪೂಜಿಸುವಂತಾದ ಕೆ.ಎಸ್.ನಿಸಾರ್ ಅಹಮದ್ ಅವರು ಅರವತ್ತಕ್ಕು ಹೆಚ್ಚು ಕೃತಿಗಳನ್ನು ರಚಿಸಿದವರು.ಅವರು ಎಂದುಕೂಡ ಜಾತಿ ಮತ ಧರ್ಮಗಳ ಕುರಿತು ಯೋಚಿಸಿದವರಲ್ಲ.ಅವರಲ್ಲೊಬ್ಬ ಪ್ರಖರ ಚಿಂತಕನಿದ್ದನು,ಆದ್ದರಿಂದ ಅವರಿಗೆ ಅವರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.ಅಲ್ಲದೆ ಅವರ ಸಾಹಿತ್ಯದಲ್ಲಿನ ಕನ್ನಡತನವನ್ನು ಗುರುತಿಸಿಯೆ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದರು.ಇಂದು ಅವರು ನಮ್ಮನ್ನಗಲಿದ್ದರು ಅವರ ಕನ್ನಡ ಪ್ರೇಮವನ್ನು ನಾವೆಲ್ಲರು ಅಳವಡಿಸಿಕೊಂಡರೆ ನಿಸಾರ್ ಅಹಮದ್ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಲಿದೆ ಎಂದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ಕವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತರಾದ ಮಲ್ಲು ಗುಳಗಿ, ಸೋಮಶೇಖರ ನರಬೋಳಿ,ಶ್ರೀಕರ ಜೋಷಿ,ಮಹಾದೇವಪ್ಪ ಬೊಮ್ಮನಹಳ್ಳಿ,ಪರಶುರಾಮ ಮಲ್ಲಿಬಾವಿ,ಮಲ್ಲಿಕಾರ್ಜುನ ತಳ್ಳಳ್ಳಿ,ಕಲೀಂ ಫರೀದಿ,ಮುರಳಿಧರ ಅಂಬುರೆ,ರಾಘವೆಂದ್ರ ಮಾಸ್ತರ್, ಮದನಕುಮಾರ ಕಟ್ಟಿಮನಿ,ಹಣಮಂತ ನಾಯಕ ದೊರೆ,ಕುಮಾರ ಹೂಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here