ದಿನಸಿ ಕಿಟ್  ಪೂರೈಕೆಯ ವ್ಯವಸ್ಥೆಗೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

0
26

ಕಲಬುರಗಿ: ಲಾಕ್ ಡೌನ್ ಘೊಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ  ಯಾವ ದಲಿತ ಓಣಿಗಳಿಗೆ ಯಾರೊಬ್ಬರೂ ಭೇಟಿ ನೀಡಿ ಆಹಾರ ಧಾನ್ಯ ಮತ್ತು ದಿನಸಿ ಕಿಟ್ ಗಳು ಹಂಚಿಕೆ ಮಾಡಿಲ್ಲ ಚಿಂಚೋಳಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯ ರಮೇಶ್ ಯಾಕಪೂರ ಕಳವಳ ವ್ಯಕ್ತಪಡಿಸಿ ದಲಿತ ಬಡವಾಣೆಗಳಿಗೆ ಆಹಾರ ಪದಾರ್ಥಗಳ ವಿಶೇಷ ಪ್ಯಾಕೇಜ್ ತಲುಪಿಸುವ ಕ್ರಮ ಮಾಡಬೇಕೆಂದು ಆಗ್ರಹಿಸಿದರು.

ಕೊರೊನಾ ಸೊಂಕು ತಗಲುವಿಕೆ ತಡೆಯುವ ಹಿನ್ನೆಲೆಯಲ್ಲಿ ಇಡಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೊಷಣೆಯಾದ ಕಾರಣ ದಲಿತ (ಎಡ ಮತ್ತು ಬಲ ) ಸಮುದಾಯದ ಕ್ರಷಿ ಕಾರ್ಮಿಕರು. ಹಾಗು ಇತರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರು. ಕೆಲಸವಿಲ್ಲದ ಕಾರಣ ಆಹಾರ ಧಾನ್ಯ ಹಾಗು ಇತರ ಅಡುಗೆ ದಿನಸಿ ಸಾಮಾಗ್ರಿಗಳು ಖರಿದಿಸಲು ಹಣದ ಕೊರತೆಯು ಉಂಟಾಗಿರುತ್ತದೆ. ಸರ್ಕಾರ ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ವಿತರಿಸುವ ಅಕ್ಕಿ, ಗೋದಿ, ಬೇಳೆ, ಅವರಿಗೆ ಸಾಲದಾಗಿದೆ. ಅನೇಕ ದಾನಿಗಳು ಮಾನವತಾ ಮೆರೆದು ಧಾನದ ರೂಪದಲ್ಲಿ ಆಹಾರ ಧಾನ್ಯ ಮತ್ತು ದಿನಸಿ ಕಿಟ್ಟಗಳು ತಮ್ಮ ವಶಕ್ಕೆ ಕೊಡುತ್ತಿದ್ದಾರೆ.

Contact Your\'s Advertisement; 9902492681

ದಾನಿಗಳಿಂದ ಸಂಗ್ರಹವಾದ ದವಸ ಧಾನ್ಯ ಮತ್ತು ದಿನಸಿ ಕಿಟ್ಟಗಳು ಕೆಲವೊಂದು ಸಮುದಾಯದವರಿಗೆ ಮಾತ್ರ ಸ್ಥಳಿಯ ಆಡಳಿತದ ವತಿಯಿಂದ ಪೊರೈ ಲಾಗುತ್ತಿದೆ ಎಂಬ ದೂರು ಕೂಡ ಜನಮನದಲ್ಲಿ ಇದೇ, ಆದ್ದರಿಂದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಜನರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ.ಪಾಂಡುರಂಗ ಲೊಡ್ಡನೂರ್.ಉಲ್ಲಾಸ ಕೆರೊಳ್ಳಿ.ಪ್ರೇಮ ಕಟ್ಟಿ.ಆನಂದ ಟೈಗರ್ ಗೋ ಪಾಲ ರಾಂಪೂರೆ.ಸತೀಷ್ ರಾದಕ್ರಷ್ಣ ಹೊಸಮನಿ. ಸಂತೋಷ ಗುತ್ತಿಗೆದಾರರು.ಮಲ್ಲು ಗುಲಗುಂಜಿ.ಗೌತಮ್ ಬೊಮ್ಮನಹಳ್ಳಿ.ರಾಜಶೇಖರ ಹೊಸಮನಿ.ಓಮನರಾವ ಕೊರವಿ.ಮಾರುತಿ ಗಂಜಗಿರಿ ಮುಂತಾದವರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here