ಶಹಾಬಾದ: ನಗರದಲ್ಲಿ ಮೂರು ಕರೋನಾ ಸೊಂಕು ಕಂಡು ಬಂದ ಇಂದಿರಾ ನಗರ ಮಡ್ಡಿ ರೈಲ್ವೆ ಗೇಟ್ ಬಡಾವಣೆಯನ್ನು ಕಂಟೋನ್ಮೇಟ್ ಜೋನ್ನ್ನು ತಾಲೂಕಾಢಳಿತದ ಆದೇಶದ ಮೇರೆಗೆ ನಗರಸಭೆಯ ಸಿಬ್ಬಂದಿ ವರ್ಗದವರು ತೆರವುಗೊಳಿಸಿದರು.
ನಗರದ ಇಂದಿನರಾ ನಗರ ಮಡ್ಡಿಯಲ್ಲಿ ಜಮಾತ್ಗೆ ಹೋಗಿ ಬಂದ ವ್ಯಕ್ತಿಯ ಹೆಂಡತಿ ಹಾಗೂ ಸೊಸೆಗೆ ಹಾಗೂ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕರೋನಾ ಸೊಂಕು ಕಾಣಿಸಿಕೊಂಡಿದ್ದರಿಂದ ಸುಮಾರು ಒಂದು ತಿಂಗಳಿನಿಂದ ಈ ಪ್ರದೇಶವನ್ನು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿ ಘೋಷಿಸಿ, ಈ ಭಾಗಕ್ಕೆ ಬರುವ ಎಲ್ಲಾ ವರ್ತುಲ ರಸ್ತೆಗಳನ್ನು, ನಗರದಿಂದ ಬರುವ ಒಂದು ಮುಖ್ಯ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್, ಮುಳ್ಳುಕಂಟಿಗಳನ್ನು ಹಾಕಿ ಜನರು ಬರದಂತೆ ಮತ್ತು ಹೋಗದಂತೆ ಮುಚ್ಚಲಾಗಿತ್ತು. ಪೊಲೀಸ್,ವೈದ್ಯಕೀಯ ಸಿಬ್ಬಂದಿಯಿಂದ ನಿಗಾ ವಹಿಸಲಾಗಿತ್ತು. ನಂತರ ಆ ಮೂವ್ವರನ್ನು ತಪಾಸಣೆಗೆ ಒಳಪಡಿಸಿ, ಸುಮಾರು ಇಪ್ಪತ್ತು ದಿನಗಳ ನಂತರ ಗುಣಮುಖರಾಗಿ ಮತ್ತೆ ಮರಳಿ ಬಂದಿದ್ದಾರೆ.
ಸುಮಾರು ಒಂದು ತಿಂಗಳುಗಳಿಂದ ಆತಂಕದಲ್ಲಿ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.ಇದರಿಂದ ನಗರದಲ್ಲಿನ ಮೂರು ಸೊಂಕಿತರು ಗುಣಮುಖರಾಗಿದ್ದರಿಂದ ಸೊಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಸುಮಾರು ದಿನಗಳಿಂದ ಗೃಹ ಬಂಧನದಲ್ಲಿದ್ದ ಮಡ್ಡಿ ಪ್ರದೇಶದಲ್ಲಿನ ಜನತೆಗೆ ಅವಶ್ಯಕ ವಸ್ತುಗಳ ಖರೀದಿಗೆ ಎಲ್ಲಾ ರಸ್ತೆಗಳನ್ನು ನಗರಸಭೆಯ ಸಿಬ್ಬಂದಿಗಳು ತೆರವುಗೊಳಿಸಿದರು.