ಬೀಹಾರ ಮೂಲದ ಕಾರ್ಮಿಕರಿಗೆ ಸೆಂಟ್ ಮೇರಿ ಚರ್ಚ್ ಸೇವಾ ಸಂಗಮದಿಂದ ಹಣ್ಣು ಹಂಪಲ ವಿತರಣೆ

0
81

ಕಲಬುರಗಿ: ನಗರದ ರೈಲು ನಿಲ್ದಾಣದಲ್ಲಿ 1500 ಕ್ಕೂ ಹೆಚ್ಚು ಬೀಹಾರ ಮೂಲದ ವಲಸೆ ಕಾರ್ಮಿಕರು ವಿಶೇಷ ರೈಲಿನಲ್ಲಿ ತಮ್ಮ ಮೂಲ ನಿವಾಸಕ್ಕೆ ಹೊರಡುವ ಸಂದರ್ಭದಲ್ಲಿ ಸೆಂಟ್ ಮೇರಿ ಚರ್ಚ್ ಸೇವಾ ಸಂಗಮ ಮತ್ತು ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಚಿತ್ರಾನ್ನ, ಬಾಳೆ ಹಣ್ಣು, ಬ್ರೆಡ ಮತ್ತು ನೀರಿನ ಬಾಟಲ್‍ನ್ನು 1500 ಜನರಿಗೆ ಆಗುವಷ್ಟು ಊಟದ ಕಿಟ್ ಗಳನ್ನೂ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ಫಾದರ್ ವಿಜಯರಾಜು ಎಸ್.ಜೆ, ಸೇವಾ ಸಂಗಮದ ವ್ಯವಸ್ಥಾಪಕಿ ಸಿಸ್ಟರ್ ರೂಪಾ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ಸಂಯೋಜಕ ರಾಹುಲ ಮಾಳಗೆ, ರೈಲ್ವೆ ಚೈಲ್ಡ್ ಲೈನ್ ಸಂಯೋಜಕ ಅಶೋಕ, ಶ್ವೇತಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here