ಕಬ್ಬಿನ ಹಣ ಪಾವತಿಗಾಗಿ ರಾತ್ರೋ ರಾತ್ರಿ ಕಚೇರಿಗೆ ನುಗ್ಗಿ ಹಲ್ಲೆ

0
186

ಕಲಬುರಗಿ: ಅಳಂದ ತಾಲ್ಲೂಕಿನ ಭೂಸನೂರ್ ಎನ್.ಎಸ್.ಎಲ್. ಶೂಗರ್ ಫ್ಯಾಕ್ಟರಿಗೆ ಕಿಡಗೇಡಿಗಳು ನುಗ್ಗಿ ಹಲ್ಲೆ ನಡೆಸಿದ ಪರಿಣಾಮ ಫ್ಯಾಕ್ಟರಿಯ ಸೆಕ್ಯೂರಿಟಿ, ಗಾರ್ಡ್ ಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ಸೆಕ್ಯೂರಿಟಿ, ಗಾರ್ಡ್ ಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಬ್ಬಿನ ಹಣ ಪಾವತಿ ಮಾಡಿ ಎಂದು ಧರ್ಮರಾಜ ಸಾಹು ಸೇರಿದಂತೆ 5-6 ಜನ ರಾತ್ರೋ ರಾತ್ರಿ ಫ್ಯಾಕ್ಟರಿಗೆ ನುಗ್ಗಿ ಸೆಕ್ಯೂರಿಟಿ, ಗಾರ್ಡ್ ಗುರುಶಾಂತ ಮೇಲೆ ಮರಣಾಂತಿಕ ಹಲ್ಲೆ ನಡೆಸಿ, ಫ್ಯಾಕ್ಟರಿಯ ಎಂ.ಡಿ ಮೇಲೆ ಹಲ್ಲೆಗೂ ಯತ್ನಿಸಿದ್ದರು ಅವರು ಸ್ಥಳದಲ್ಲಿ ಇಲ್ಲದ ಕಾರಣ ಫ್ಯಾಕ್ಟರಿಯಲ್ಲಿದ ಕಂಪ್ಯೂಟರ್, ಪ್ರಿಂಟರ್, ಪಿಟೋಪಕರ್ಣಗಳನ್ನು ಧ್ವಂಸಗೈದು,  ಕಚೇರಿ ಕಿಟಿಕಿಗಳು ಪುಡಿ ಪುಡಿ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಫ್ಯಾಕ್ಟರಿಯ ಅಧಿಕಾರಿ ಸಂಗಮೇಶ್ ಸ್ಥವರಮಠ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಿಡಗೇಡಿಗಳು ದಾಂಧಲೆ ನಡೆಸಿದ ಕೃತ್ಯ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೇರೆಯಾಗಿದೆಂದು, ಸಿಸಿಟಿವಿಯ ದೃಶ್ಯದ ಫೂಟೇಜ್ ಮಾಧ್ಯಮದವರಿಗೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ಹಲ್ಲೆ ಹಾಗೂ ಕೃತ್ಯದ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ಪಿಎಸ್ ಐ ಅವರಿಗೆ ಮಾತನಾಡಿ ದೂರು ನೀಡಿದ್ದು ಅವರು ಸ್ಥಳಕೆ ಆಗಮಿಸುವುದಾಗಿ ತಿಳಿಸಿದ್ದಾರೆಂದು ಅವರು ಹೇಳಿದ್ದರು.

ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಘಟನೆ ನಡೆದಿದ್ದು  ಪ್ರಕರಣ ದಾಖಲಿಸುವುದಾಗಿ ಫ್ಯಾಕ್ಟರಿಯ ಅಧಿಕಾರಿ ಸಂಗಮೇಶ್ ತಿಳಿಸಿದ್ದಾರೆ.

ದಾಂಧಲೆ, ಈ ಕುರಿತು ಧರ್ಮರಾಜ ಸಾಹು ಅವರಿಗೆ ಇ-ಮೀಡಿಯಾ ಲೈನ್ ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.‌

ಇದನ್ನೇ ದೊಡ್ಡದು ಮಾಡುವ ಫ್ಯಾಕ್ಟರಿ ಅಧಿಕಾರಿಗಳು ರೈತರಿಗೆ ಬಾಕಿ ಹಣ ಪಾವತಿಸಬೇಕಾಗಿರುವುದು ಕೂಡ ಅವರ ಆಧ್ಯ ಕರ್ತವ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here