ಗಿಲ್ಲೆಸುಗೂರ ಬ್ಲಾಕ್ ಕಾಂಗ್ರೇಸ್ ವೀಕ್ಷಕರಾಗಿ ರಮೇಶ ದೊರೆ ನೇಮಕ

0
342

ಸುರಪುರ: ಜೂನ್ 7ನೇ ತಾರೀಖಿನಂದು ನಡೆಯುವ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ಪಕ್ಷ ಸಂಘಟನೆ ಕುರಿತ ಕಾರ್ಯಕ್ರಮಕ್ಕೆ ರಾಯಚೂರು ಗ್ರಾಮೀಣ ಭಾಗದ ಗಿಲ್ಲೆಸುಗೂರು ಬ್ಲಾಕ್ ಕಾಂಗ್ರೇಸ್ ಸಮಿತಿಗೆ ಉಸ್ತುವರಿಯನ್ನಾಗಿ ರಮೇಶ ದೊರೆ ಆಲ್ದಾಳ ಅವರನ್ನು ನೇಮಕಗೊಳಿಸಲಾಗಿದೆ.

ಈ ಕುರಿತು ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ನೇಮಕಾತಿ ಆದೇಶ ಹೊರಡಿಸಿದ್ದು,ಈಗಾಗಲೆ ಅನೇಕ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಶ್ರಮವಹಿಸಿದ ತಮಗೆ ಗಿಲ್ಲೆಸುಗೂರು ಬ್ಲಾಕ್ ಕಾಂಗ್ರೇಸ್ ಸಮಿತಿ ಜವಬ್ದಾರಿ ನೀಡಲಾಗಿದ್ದು,ಇಲ್ಲಿಯ ಮಾಜಿ ಸಂಸದರು,ಹಾಲಿ ಮತ್ತು ಮಾಜಿ ಶಾಸಕರು,ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು 7ನೇ ತಾರೀಖು ನಡೆಯುವ ಪದಗ್ರಹಣ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಎಲ್ಲರ ವೀಕ್ಷಣೆಗಾಗಿ ಟಿ.ವಿ ಚಾನಲ್‍ಗಳಲ್ಲಿ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.ಆದ್ದರಿಂದ ಬ್ಲಾಕ್ ಕಾಂಗ್ರೇಸ್‍ನ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರನ್ನು ತಿಡಗಿಸಿಕೊಂಡು ಎಲ್ಲರು ಕಾರ್ಯಕ್ರಮದ ವೀಕ್ಷಣೆಗೆ ಅನುಕೂಲ ಮಾಡಿಕೊಡಲು ತಿಳಿಸಿದ್ದಾರೆ.

Contact Your\'s Advertisement; 9902492681

ನನ್ನ ಮೇಲೆ ಭರವಸೆಯನ್ನಿಟ್ಟು ಜವಬ್ದಾರಿ ನೀಡಿದ ಕೆಪಿಸಿಸಿ ಅಧ್ಯಕ್ಷರು ಮತ್ತು ಎಲ್ಲಾ ಕಾರ್ಯಾಧ್ಯಕ್ಷರು ಹಾಗು ಮಾಜಿ ಸಂಸದ ಬಿ.ವಿ.ನಾಯಕರು,ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಹಾಗು ಕೆಪಿಸಿಸಿ ಎಸ್ಟಿ ವಿಭಾಗದ ಅಧ್ಯಕ್ಷರಾದ ಕೆ.ಪಿ.ಪಾಲಯ್ಯನವರಿಗೂ ಧನ್ಯವಾದ ಅರ್ಪಿಸುವುದಾಗಿ ರಮೇಶ ದೊರೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here