ಮೋಹನ್ ಕುಮಾರ್ ದಾನಪ್ಪ ನವರಿಗೆ ” ಕರ್ನಾಟಕ ಭೂಷಣ ಪ್ರಶಸ್ತಿ” ಪ್ರದಾನ

0
219

ಬೆಂಗಳೂರು: ಬೆಂಗಳೂರಿನ ಕನ್ನಡ ಭವನದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಬೆಂಗಳೂರು ನವರ ವತಿಯಿಂದ ಹಮ್ಮಿಕೊಂಡ ವಿಚಾರ ಸಂಕೀರಣ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ವಕೀಲ ಮೋಹನ್ ಕುಮಾರ್ ದಾನಪ್ಪ ನವರಿಗೆ ” ಕರ್ನಾಟಕ ಭೂಷಣ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಅರಳಿ ನಾಗರಾಜ್, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ನೋಂದಣಾಧಿಕಾರಿ ಡಾ. ಲಕ್ಷ್ಮೀಪತಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ, ಒ.ಎನ್.ಜಿ ಸಿಯ ಆಡಳಿತ ಕ್ಷೇತ್ರದ ಮುಖ್ಯ ವ್ಯವಸ್ಥಾಪಕರಾದ ವೆಂಕಟಕೃಷ್ಣ, ಖ್ಯಾತ ಸಾಹಿತಿಗಳು & ವಿಮರ್ಶಕರಾದ ಶ್ರೀ ಡಾ. ರಾಮಕೃಷ್ಣಯ್ಯ ಮದ್ದೆಗ್ರಾಮ, ಸಮಾಜ ಸೇವಕರಾದ ಡಾ. ಎನ್.ವಿ. ಜೈ ಶಂಕರ್ ರೆಡ್ಡಿ, ಸದ್ರಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಹಿತಿ, ನಟ ನಿರ್ದೇಶಕ, ಪತ್ರಕರ್ತರಾದ ಡಾ. ಗುಣವಂತ ಮಂಜು, ಹಾಗೂ ಬಿಗ್ ಬಾಸ್ ಖ್ಯಾತಿ ಕುಮಾರಿ ಸೋನು ಪಾಟೀಲ್, ಶ್ರೀಸಾಮಾನ್ಯ ಚಿತ್ರದ ಸಹ ನಟಿ & ರಾಜಪಥ ಚಿತ್ರದ ನಾಯಕ ನಟಿ ಕುಮಾರಿ ನಿತ್ಯ ಜೀಸಸ್, ಹಾಗೂ ಇತರೆ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here