ಹೋರಾಟಗಾರರ ಅಭಿಮಾನಿ ಬಳಗದವರು ಪರಿಸರ ಪ್ರೇಮ ಮಾದರಿ: ಸೇಡಂ

0
33

ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾಂಗಣದ ಆವರಣದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವೀರೆಂದ್ರ ಪಾಟೀಲ್ ರಾಯಕೋಡ ನೆತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹೋರಾಟಗಾರರ ಹೆಸರುಗಳನ್ನು ಸಸಿಗಳಿಗೆ ನಾಮಕರಣ ಮಾಡುವುದರ ಮೂಲಕ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಶಿಕ್ಷಣದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ ಅವರು ಸಸಿಗಳನ್ನು ನೆಟ್ಟುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಸಸಿ ನೇಟ್ಟು ಹೋರಾಟಗಾರರ ಅಭಿಮಾನಿ ಬಳಗದವರು ಪರಿಸರ ಪ್ರೇಮ ಮಾದರಿಯಾದದ್ದು ಜೋತೆಗೆ ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ಸಸಿಗಳಿಗೆ ನಾಮಕರಣ ಮಾಡುವುದರ ಮೂಲಕ ಹೋರಾಟಗಾರರ ಹೆಸರು ಅಜರಾಮರವಾಗಿರುವಂತೆ ಮುಂದಿನ ಪಿಳಿಗೆಗೆ ಪರಿಚಯಿಸುವದರ ಮೂಲಕ ಕರ್ನಾಟಕ ಅಭಿಮಾನ ಹೆಮ್ಮೆಯ ಸಂಗತಿಯಾಗಿದೆ ಎಂದು ಸೇಡಂ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೃಷ್ಣಾಜಿ ಜೋಶಿ, ಅಶೋಕ ಗುರುಜಿ, ಡಾ.ಇಂದಿರಾ ಶಕ್ತಿ, ಅರವಿಂದ ಗೂರುಜಿ, ರಾಜು ಗೌಡನಾಗನಹಳ್ಳಿ, ಗೀರಿಶಗೌಡ ಇನಾಮದಾರ, ಶಿವಲಿಂಗ ಪಾಟೀಲ್, ಪ್ರಹ್ಲಾದ ಮಠಮಾರಿ, ನೀಕಿಲ ಕಿವುಡೆ, ಪ್ರದೀಪ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here