ಮಣ್ಣು ಆರೋಗ್ಯದ ಕುರಿತು ಅರಿವು ಮೂಡಿಸಿ ಚೀಟಿ ವಿತರಣೆ ಕಾರ್ಯಕ್ರಮ

0
134

ಸುರಪುರ: ತಾಲೂಕಿನ ಬಿಜಾಸಪುರ ಗ್ರಾಮದ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ೨೦೧೯-೨೦ನೇ ಸಾಲಿನ ಮಣ್ಣು ಆರೋಗ್ಯ ಚೀಟಿ ಯೋಜನೆ ಅಡಿಯಲ್ಲಿ ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಫೀಡರ್ ಸುರಪುರ ಪ್ರಯೋಗಾಲಯಕ್ಕೆ ಬಿಜಾಸಪುರ,ದೇವಿಕೇರಾ ಹಾಗು ಖಾನಾಪುರ ಎಸ್.ಹೆಚ್.ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು.

ಈ ಗ್ರಾಮಗಳಲ್ಲಿನ ನಿಗದಿಪಡಿಸಿದ ೮೦೦ ಫಲಾನುಭವಿ ರೈತರ ಜಮೀನಿನ ಮಣ್ಣು ಮಾದರಿಗಳ ಮಣ್ಣು ಆರೋಗ್ಯ ಕಾರ್ಡುಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭೀಮರಾಯ ಹವಾಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ,ಮುಂಗಾರು ಹಂಗಾಮಿನ ಬಿತ್ತನೆ ಪೂರ್ವದಲ್ಲಿ ರೈತರು ಮಣ್ಣು ಆರೋಗ್ಯ ಚೀಟಿ ಪಡೆದು ಲಾಭ ಪಡೆಯುವಂತೆ ತಿಳಿಸಿದರು.

Contact Your\'s Advertisement; 9902492681

ಕೃಷಿ ವಿಜ್ಞಾನಿ ಡಾ: ಉಮೇಶ ಬಿರಾದಾರ ಮಾತನಾಡಿ,ಮಣ್ಣು ಆರೋಗ್ಯ ಚೀಟಿಯ ಮಾಹಿತಿ ನೀಡಿ,ಇದರಿಂದ ರೈತರು ತಮ್ಮ ಹೊಲದಲ್ಲಿನ ಮಣ್ಣಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳಾದ ಸಾರಜನಕ,ರಂಜಕ ಮತ್ತು ಪೋಟ್ಯಾಸಿಯಂ ಸೇರಿದಂತೆ ಅವಶ್ಯಕವಾದ ಪೊಷಕಾಂಶಗಳ ಮಾಹಿತಿ ಪಡೆದು ಅದರಂತೆ ಬೇಸಾಯ ಮಾಡಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ದಾನಪ್ಪ ಕತ್ನಳ್ಳಿ ಮಾತನಾಡಿ,ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗೆ ದೊರೆಯುವ ಲಾಭಗಳು ಮತ್ತು ಲಭ್ಯವಿರುವ ಬಿತ್ತನೆ ಬೀಜಗಳ ಕುರಿತು ಮಾಹಿತಿ ನೀಡಿ,ಕೋರೊನಾ ಕುರಿತು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಣ್ಣು ಪರೀಕ್ಷಾ ಕೇಂದ್ರದ ನಿರ್ವಾಹಕ ಬಾಲರಾಜ ಚಂದುಕರ,ತಾಂತ್ರಿಕ ವ್ಯವಸ್ಥಾಪಕ ವಿನಾಯಕ ಚವ್ಹಾಣ ರೈತ ಮುಖಂಡರಾದ ಶಾಂತರಡ್ಡಿಗೌಡ ಪೊಲೀಸ್ ಪಾಟೀಲ್,ಮಾನಪ್ಪ ನಾಯಕ,ಮಹಿಬೂಬ ಜಮಾದಾರ,ರಾಮಣ್ಣ ಬಬಲಾದಿ,ಅಮರಪ್ಪ ಬಿಜಾಸಪುರಕರ,ಸಿದ್ರಾಮ,ಮಲ್ಕಪ್ಪ ನಾಯಕ,ಚಂದ್ರಶೇಖರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here